Advertisement

ದಾಮೋದರ ದೇವರ ಕೃಪೆಯಿಂದ ದೇಶಸೇವೆ ಮಾಡುವ ಭಾಗ್ಯ ಲಭಿಸಿದೆ- ರಾಜ್ಯಪಾಲ ರಾಜೇಂದ್ರ ಅರ್ಲೇಕರ್

06:51 PM Jul 26, 2021 | Team Udayavani |

ಪಣಜಿ: ದಾಮೋದರ ದೇವರ ಕೃಪೆಯಿಂದ ದೇಶಸೇವೆ ಮಾಡುವ ಭಾಗ್ಯ ಲಭಿಸಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಪಾಲರ ಸ್ಥಾನ ಲಭಿಸಿದೆ. ಆ ಪದವಿಯ ಮಾನ ಸಮ್ಮಾನಗಳನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ನುಡಿದರು.

Advertisement

ಗೋವಾಕ್ಕೆ ಆಗಮಿಸಿದ ಅವರು ವಾಸ್ಕೊ ಗ್ರಾಮದೇವ ದಾಮೋದರ ದೇವರ ದರ್ಶನ ಪಡೆದರು.

ಇದನ್ನೂ ಓದಿ: ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ: ಮೂವರು ಗಂಭೀರ ಗಾಯ

ದೇಶಾದ್ಯಂತ ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಜಲಪ್ರಳಯವಾಗಿ, ಅಪಾರ ಹಾನಿ ಸಂಭವಿಸಿದೆ. ದಾಮೋದರ ದೇವರು ದೇಶದ ಎಲ್ಲ ಸಂಕಷ್ಟಗಳನ್ನೂ ದೂರಮಾಡಲಿ ಎಂದು ಹಿಮಾಚಲಪ್ರದೇಶದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next