Advertisement

ಅಪ್ಪನ ಸ್ಪರ್ಧೆಗೆ ಅಡ್ಡಿಯಾದ ಮಗ : ದಿನೇಶ್ ಗುಂಡೂರಾವ್ ಆರೋಪ

05:27 PM Jan 29, 2022 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪರ್ಯೆ ಕ್ಷೇತ್ರದ ಚುನಾವಣಾ ಕಣದಿಂದ  ಮಾಜಿ ಮುಖ್ಯಮಂತ್ರಿ, 83 ವರ್ಷದ ಪ್ರತಾಪಸಿಂಹ ರಾಣೆ ಹಿಂದೆ ಸರಿದಿದ್ದು, ಸಚಿವ ವಿಶ್ವಜಿತ್ ರಾಣೆ ತಂದೆಯ ರಾಜಕಾರಣಕ್ಕೆ ಅಡ್ಡಿಯಾಗಿದ್ದಾರೆ ಎಂದು ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಪರ್ಯೆ ಕ್ಷೇತ್ರದಿಂದ ಪ್ರತಾಪಸಿಂಹ ರಾಣೆ ಸ್ಫರ್ಧಿಸಲಿದ್ದಾರೆ ಎಂದು ಅವರಿಗೆ ಕಾಂಗ್ರೇಸ್ ಟಿಕೆಟ್ ನೀಡಿತ್ತು. ರಾಣೆಯವರು ಇಂದೂ ಕೂಡ ಚುನಾವಣೆ ಸ್ಫರ್ಧೆಗೆ ಉತ್ಸುಕರಾಗಿದ್ದಾರೆ. ಪ್ರತಾಪಸಿಂಹ ರಾಣೆ ಚುನಾವಣೆಗೆ ಸ್ಫರ್ಧಿಸದಂತೆ ಕುಟುಂಬದವರು ಅವರ ಮೇಲೆ ಒತ್ತಡ ಹೇರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಬಹುಶಃ ಪ್ರತಾಪಸಿಹ ರಾಣೆಯವರು ಜೀವನದ ಈ ಹಂತದಲ್ಲಿ ತನ್ನ ಮಗನನ್ನು ಎದುರಿಸಲು ಬಯಸಲಿಲ್ಲ. ಮಗ ಅವರನ್ನು ಪಕ್ಕಕ್ಕೆ ತಳ್ಳಿರಬಹುದು. ಇದು ಅತ್ಯಂತ ದುರದೃಷ್ಠಕರ ಸಂಗತಿ. ಮಗ ತನ್ನ ತಂದೆಯನ್ನು ಗೌರವಿಸಬೇಕಿತ್ತು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಪರ್ಯೆ ಕ್ಷೇತ್ರದಿಂದ ಮಾವನ ವಿರುದ್ಧ ಸೊಸೆ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಲಿದ್ದಾರೆ ಎಂದು ಈ ಕ್ಷೇತ್ರ ಭಾರಿ ಚರ್ಚೆಗೆ ಕಾರಣವಾಗಿತ್ತು. ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಣೆ ಯವರ ಸೊಸೆ ಡಾ. ದಿವ್ಯಾ ರಾಣೆ ಸ್ಫರ್ಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next