Advertisement

ಬಂಡಾಯ ಶಾಸಕರಿದ್ದ ಹೋಟೆಲ್‍ನಲ್ಲಿ ನಕಲಿ ಹೆಸರು ಹೇಳಿ ತಂಗಿದ್ದ ಎನ್‍ಸಿಪಿ ಕಾರ್ಯಕರ್ತರ ಬಂಧನ

05:56 PM Jul 03, 2022 | Team Udayavani |

ಪಣಜಿ: ಶಿವಸೇನೆಯ ಬಂಡಾಯ ಶಾಸಕರು ತಂಗಿದ್ದ ಹೋಟೆಲ್‍ನಲ್ಲೇ ನಕಲಿ ಹೆಸರು ಹೇಳಿ ತಂಗಿದ್ದ ಎನ್‍ಸಿಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಹರಿಯಾಣದ ಸೋನಿಯಾ ದೋಹನ್ (30),ಹಾಗೂ ಉತ್ತರಾಖಂಡದ ಶ್ರೇಯಾ ಕೋಥಿಯಾಲ್  (26) ಬಂಧಿತರು

ಈ ಬಗ್ಗೆ ಪಣಜಿ ಪೋಲಿಸ್ ಇನ್ಸಪೆಕ್ಟರ್ ಸೂರಜ್ ಗಾವಸ್ ಮಾಹಿತಿ ನೀಡಿ, ಬಂಧಿತರಿಬ್ಬರೂ ಮಹಾರಾಷ್ಟ್ರ ಶಾಸಕರು ತಂಗಿದ್ದ ತಾಜ್ ಹೋಟೆಲ್‍ನಲ್ಲಿ ನಕಲಿ ದಾಖಲಾತಿಯನ್ನು ನೀಡಿ ವಾಸ್ತವ್ಯ ಹೂಡಿದ್ದರು. ಈ ಹೋಟೆಲ್‍ಗೆ ಪತ್ರಕರ್ತರಿಗೂ ಪ್ರವೇಶ ನಿರಾಕರಿಸಲಾಗಿತ್ತು ಎಂಬ ಮಾಹಿತಿ ನೀಡಿದರು.

ಇದನ್ನೂ ಓದಿ: ಕುಣಿಗಲ್ : ಸ್ನೇಹಿತನ ಅಂತ್ಯಕ್ರಿಯೆಗೆ ಬಂದವ ರಸ್ತೆ ಅಪಘಾತಕ್ಕೆ ಬಲಿ

ಸದ್ಯ ಬಂಧಿತರಾದ ಸೋನಿಯಾ ಮತ್ತು ಶ್ರೇಯಾ ಇವರಿಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Advertisement

ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next