Advertisement

Goa Calangute ಚಿನ್ನಾಭರಣ, ನಗದು ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

06:12 PM Dec 22, 2023 | Team Udayavani |

ಪಣಜಿ: ಗೋವಾದ ಕಲಂಗುಟ್‍ನಲ್ಲಿ ಪ್ರವಾಸಿಗರ ಲಗೇಜ್ ಕಳ್ಳತನ ಮುಂದುವರಿದಿದೆ. ಕಲಂಗುಟ್ ನಲ್ಲಿ ಪ್ರವಾಸಿಗರೊಬ್ಬರ ಚಿನ್ನದ ಸರ ಹಾಗೂ ನಗದು ಕಳವು ಪ್ರಕರಣ ಬೆಳಕಿಗೆ ಬಂದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕರ್ನಾಟಕದಿಂದ ಗೋವಾಕ್ಕೆ ಬಂದಿದ್ದ ಪ್ರವಾಸಿ ಸಂತೋಷ್ ಎಚ್.ಎ. ಅವರು ವಾಕಿಂಗ್‍ಗಾಗಿ ಕಲಂಗುಟ್‍ಗೆ ಬಂದಿದ್ದರು. ಇಲ್ಲಿನ ಲಿಟಲ್ ಗೋವಾ ಹೋಟೆಲ್ ನಲ್ಲಿ ಅವರು ತಂಗಿದ್ದರು. ಇದೇ ವೇಳೆ ಯಾರೋ ಅಪರಿಚಿತ ಕಳ್ಳರು ಅವರ ಮೇಲೆ ದಾಳಿ ಮಾಡಿ ಒಪ್ಪೋ ರೆನೋ ಮೊಬೈಲ್ ಫೋನ್, 19 ಸಾವಿರ ನಗದು ಹಾಗೂ ಕತ್ತಿನಲ್ಲಿದ್ದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಡಿ. 21 ರಂದು ಈ ಘಟನೆ ನಡೆದಿದೆ. ಪ್ರವಾಸಿಗರಿಂದ ಒಟ್ಟು 1,95,000 ರೂ. ಮೌಲ್ಯದ ವಸ್ತುವನ್ನು ಕಳ್ಳರು ದೋಚಿ ಪರಾರಿಯಾಗಿದ್ದರು.

ಆರೋಪಿಯನ್ನು ಪತ್ತೆ ಹಚ್ಚಲು ಕಲಂಗುಟ್ ಪೊಲೀಸರು ಸಬ್ ಇನ್ಸ್ ಪೆಕ್ಟರ್ ಅಕ್ಷಯ್ ಪರ್ಸೇಕರ್ ನೇತೃತ್ವದಲ್ಲಿ ತಂಡ ರಚಿಸಿದ್ದರು. ಆರೋಪಿಗಳನ್ನು ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‍ಪುರ ನಿವಾಸಿಗಳಾದ ಮೊರ್ಸಾಲಿನ್ ಸೈದುಲ್ ಮೊಲ್ಲಾ(20), ರಾಜು ಮೊಲ್ಲಾ(19), ಅಖ್ತರ್ ಅಲಿ(24), ಮತ್ತು ರಾಕಿಫುಲ್ ಮೊಂಡಲ್ (19) ಎಂದು ಗುರುತಿಸಲಾಗಿದೆ.

ಪೊಲೀಸರು ತಪಾಸಣೆ ನಡೆಸಿದಾಗ ಚಿನ್ನದ ಸರ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಲಂಗುಟ್ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಪ್ರಕರಣದ ವಿಚಾರಣೆಗಾಗಿ ಅವರನ್ನು ಮಾಪ್ಸಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಇನ್ಸ್ ಪೆಕ್ಟರ್ ಪರೇಶ್ ನಾಯ್ಕ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಅಕ್ಷಯ್ ಪರ್ಸೇಕರ್, ಹೆಡ್ ಕಾನ್ ಸ್ಟೇಬಲ್ ಪ್ರಶಾಂತ್ ಚೋಪ್ಡೇಕರ್, ಕಾನ್ ಸ್ಟೇಬಲ್ ಅಮೀರ್ ಗಾರ್ಡ್, ವಿನಯ್ ನಾಯ್ಕ್, ಮಯೂರ್ ಗಾವಡೆ, ನಿತೇಶ್ ಸಲಗಾಂವ್ಕರ್, ಅಭಯ್ ಚಿಂಚಿಂಕರ್, ಬಾಬುಸೋ ಸಲಗಾಂವ್ಕರ್ ಇವರು ಕಳ್ಳರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next