Advertisement

ನಿಮ್ಮ ರಾಜಕೀಯ ಲಾಭಕ್ಕಾಗಿ ನ್ಯಾಯಪೀಠವನ್ನು ಬಳಸಬೇಡಿ!

10:05 AM Jan 29, 2020 | Team Udayavani |

ಹೊಸದಿಲ್ಲಿ: ರಾಜಕೀಯ ದ್ವೇಷದ ಕಾರಣ ಪಶ್ಚಿಮ ಬಂಗಾಲದಲ್ಲಿ ಕೊಲೆಗಳು ನಡೆಯುತ್ತಿವೆ ಎಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಬಿಜೆಪಿ ಅರ್ಜಿ ದಾಖಲಿಸಿದೆ. ಇದರ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ತುಸು ಸಿಟ್ಟಾಗಿದ್ದಾರೆ. ನಿಮ್ಮ ರಾಜಕೀಯ ಹೆಚ್ಚುಗಾರಿಕೆಗಾಗಿ ನ್ಯಾಯಾಲಯವನ್ನು ಬಳಸಿಕೊಳ್ಳ ಬೇಡಿ, ಬದಲಿಗೆ ಟೀವಿ ವಾಹಿನಿಗಳ ಬಳಿ ಹೋಗಿ ಎಂದು ವಕೀಲರಾದ ಗೌರವ್‌ ಭಾಟಿಯಾ, ಕಪಿಲ್‌ ಸಿಬಲ್‌ಗೆ ಕಟುವಾಗಿ ಹೇಳಿದ್ದಾರೆ.

Advertisement

ಬಂಗಾಲದಲ್ಲಿ ನಡೆಯುತ್ತಿರುವ ಕೊಲೆಗಳ ವಿರುದ್ಧ ಬಿಜೆಪಿ ವಕ್ತಾರ ಗೌರವ್‌, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಪರವಾಗಿ ಗೌರವ್‌, ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸರಕಾರದ ಪರ ಕಪಿಲ್‌ ಸಿಬಲ್‌ ವಾದಿಸುತ್ತಿದ್ದಾರೆ. ಈ ವೇಳೆ ಪರಸ್ಪರ ಇಬ್ಬರೂ ವಕೀಲರು ಆರೋಪ, ಪ್ರತ್ಯಾರೋಪ ನಡೆಸಿದರು.

ಆಗ ಮುಖ್ಯ ನ್ಯಾಯಮೂರ್ತಿಗಳು, ಎರಡೂ ಬಣ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನ್ಯಾಯಪೀಠವನ್ನು ಬಳಸಿಕೊಳ್ಳುತ್ತಿರುವುದು ಗೊತ್ತಿದೆ. ಇದರ ಬದಲು ನೀವು ಟೀವಿ ವಾಹಿನಿಗೆ ಹೋಗುವುದು ಉತ್ತಮ ಎಂದು ಹೇಳಿದರು.

ಇದೇ ವೇಳೆ ನ್ಯಾಯಪೀಠ ಪಶ್ಚಿಮ ಬಂಗಾಲ ಸರಕಾರಕ್ಕೆ ನಿರ್ದೇಶನ ನೀಡಿ, 4 ವಾರದೊಳಗೆ ಬಿಜೆಪಿ ಕಾರ್ಯಕರ್ತ ದುಲಾಲ್‌ ಕುಮಾರ್‌ ಹತ್ಯೆ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next