Advertisement

ಕೋವಿಡ್-19 ಹಿನ್ನೆಲೆ ರೈತರ ಬಳಿಗೆ ತೆರಳಿ ತರಕಾರಿ ಖರೀದಿಸಿ ಉಚಿತವಾಗಿ ವಿತರಣೆ

04:34 PM Apr 19, 2020 | keerthan |

ಗಂಗಾವತಿ: ಕೋವಿಡ್-19 ರೋಗ ಹರಡದಂತೆ ಕರ್ಪ್ಯೂ ವಿಧಿಸಿರುವುದರಿಂದ ರೈತರು ಬೆಳೆದ ತರಕಾರಿ ಮತ್ತು ತೋಟಗಾರಿಕಾ ಬೆಳೆಗಳನ್ನು ಖರೀದಿಸುವವರಿಲ್ಲದೇ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಹೀಗಾಗಿ  ತಾಲೂಕಿನ ಶ್ರೀರಾಮನಗರದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ ವೀರರಾಜು ರೈತರ ಬಳಿ ತೆರಳಿ ತರಕಾರಿಗಳನ್ನು ಕೊಂಡು, ಅಗತ್ಯವಿರುವವರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

Advertisement

ರೈತರ ಹೊಲಕ್ಕೆ ತೆರಳಿ ತರಕಾರಿ ಕಟಾವು ಮಾಡಿ ತಂದು ಶ್ರೀ ರಾಮನಗರದ ಸ್ವಯಂ ಸೇವಕರ ಸಹಕಾರದಿಂದ ಎಲ್ಲಾ ತರಕಾರಿ ಸೊಪ್ಪುಗಳು ಒಂದು ಚೀಲಕ್ಕೆ ತುಂಬಿ ಟ್ರಾಕ್ಟರ್ ನಲ್ಲಿ ತಂದು ಗಂಗಾವತಿ, ಕನಕಗಿರಿ ಕಾರಟಗಿಯಲ್ಲಿ ಹಂಚುತ್ತಿದ್ದಾರೆ.

ಶ್ರೀ ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ, ಸ್ವಯಂ ಸೇವಾ ಕಾರ್ಯಕರ್ತರು ಹೋಂಗಾರ್ಡ್, ಪೊಲೀಸ್ ಪತ್ರಕರ್ತರು, ಕೂಲಿಕಾರ್ಮಿಕರಿಗೆ ಅವರಿದ್ದಲಿಗೆ ತೆರಳಿ ವಿತರಣೆ ಮಾಡುತ್ತಿದ್ದಾರೆ. ರೆಡ್ಡಿ ಶ್ರೀನಿವಾಸ ಕಾರ್ಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಷ್ಟಕಾಲದಲ್ಲಿ ನೆರವಾಗಬೇಕು: ಕೋವಿಡ್-19 ಕಷ್ಟಕಾಲದಲ್ಲಿ ಪ್ರತಿಯೊಬ್ಬ ಕೂಲಿಕಾರ್ಮಿಕರು, ವೈದ್ಯರು ಆಶಾ‌ ಮತ್ತು‌ ಪತ್ರಕರ್ತರಿಗೆ ನೆರವಾಗುವ‌ ಮೂಲಕ‌ ಸೋಂಕು ಓಡಿಸುವ ಯೋಧರ ಕುಟುಂಬಕ್ಕೆ ನೆರವಾಗುವ ಮೂಲಕ ಅಳಿಲು ಸೇವೆ ಸಲ್ಲಿಸಲಾಗುತ್ತಿದೆ ಎಂದು‌ ರೆಡ್ಡಿಶ್ರೀನಿವಾಸ ಉದಯವಾಣಿ ಗೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next