Advertisement
ಗುರುವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರ ಪ್ರಸ್ತಾಪಿಸಿ ದರು. ಎರಡೂ ಗುಂಪಿನವರದ್ದು ತಪ್ಪುಗಳಿಗೆ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಲಾಗದು ಎಂದು ರಾಜಸ್ಥಾನ ಗೃಹ ಸಚಿವರು ನೀಡಿದ ಹೇಳಿಕೆಯನ್ನು ಅವರು ಖಂಡಿಸಿದರು. ಇದರ ಜತೆಗೆ ರಾಜಸ್ಥಾನದಲ್ಲಿ ಗೋರಕ್ಷಣೆಯ ನೆಪದಲ್ಲಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತದೆ ಎಂದು ಖರ್ಗೆ ಟೀಕಿಸಿದರು. ಆದರೆ ರಾಜಸ್ಥಾನ ಗೃಹ ಸಚಿವರನ್ನು ಸಮರ್ಥಿಸಿಕೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟು ಅವರು ಆ ರೀತಿ ಮಾತನಾಡಿದ್ದಾರೆಂದರು.
Related Articles
Advertisement
ವಿರೋಧಿಸುವವರಿಗೆ ಜಾಗವಿಲ್ಲ!: “ಪ್ರಧಾನಿ ಮೋದಿ ನಿರಂಕುಶ ಆಡಳಿತ ನಡೆಸುತ್ತಿದ್ದಾರೆ. ಅವರ ಆಡಳಿತದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಮನ್ನಣೆ ಇಲ್ಲ. ಮೋದಿ ಹಾಗೂ ಆರ್ಎಸ್ಎಸ್ ಅನ್ನು ವಿರೋಧಿಸುವವರಿಗೆ ದೇಶದಲ್ಲಿ ಜಾಗವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಮೂಲಕ ಮೋದಿ ಜಿ ಹೊಸ ದೃಷ್ಟಿಕೋನವೊಂದನ್ನು ದೇಶದಲ್ಲಿ ಬಿತ್ತುತ್ತಿದ್ದಾರೆ,’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಬಳಿಕ ಸಂಸತ್ ಆವರಣದಲ್ಲಿ ಮಾತನಾಡಿದ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋರಕ್ಷಣೆ ಸರ್ಚಾರ್ಜ್ ಶೇ.10ರಷ್ಟು ಹೆಚ್ಚಳ ರಾಜಸ್ಥಾನ ಸರ್ಕಾರ ಗೋರಕ್ಷಣೆಗೆ ಸಂಬಂಧಿಸಿದ ಸರ್ಚಾರ್ಜ್ನಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಗೋರಕ್ಷಣೆ ಮಾಡುವವರಿಗೆ ಅದೊಂದು ವೆಚ್ಚದಾಯಕವಾಗಲಿದೆ. ಈ ಬಗ್ಗೆ ಸ್ಟಾಂಪ್ ಪೇಪರ್ನಲ್ಲಿ ಒಪ್ಪಂದ ಪತ್ರ ಬರೆದುಕೊಡಬೇಕಾಗಿದೆ.
ರಾಜಸ್ಥಾನದಲ್ಲಿ ಗೋರಕ್ಷರಿಂದ ಥಳಿತಕ್ಕೆ ಒಳಗಾಗಿ ಯಾರೂ ಅಸುನೀಗಿಯೇ ಇಲ್ಲ.
– ಎಂ.ಎ.ನಖೀÌ, ಕೇಂದ್ರ ಸಚಿವ ಸಚಿವರಿಗೆ ಯಾವುದೇ ಮಾಹಿತಿ ಇಲ್ಲವೆಂದು ಕಾಣುತ್ತದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿದೆ.
– ಗುಲಾಂ ನಬಿ ಆಜಾದ್,
ಕಾಂಗ್ರೆಸ್ ನಾಯಕ