Advertisement

ಮನೆ-ಮನೆಗೆ ಲಸಿಕೆ: ಪ್ರಧಾನಿ ಮೋದಿ ಸಲಹೆ

12:48 AM Nov 04, 2021 | Team Udayavani |

ಹೊಸದಿಲ್ಲಿ: “ಜನರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಉದಾಸೀನ ಸಲ್ಲದು. ಇನ್ನು ಮನೆ-ಮನೆಗೆ ತೆರಳಿ ಲಸಿಕೆ ನೀಡಬೇಕು. ಹೊಸ ರೀತಿಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವ ಬಗ್ಗೆ ಯೋಚಿಸಿ. ಮನವೊಲಿಕೆಗೆ ಧಾರ್ಮಿಕ ಮುಖಂಡರ ಮೊರೆ ಹೋಗಿ.’ಇದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಜ್ಯ ಸರಕಾರಗಳಿಗೆ, ಅಧಿಕಾರಿಗಳಿಗೆ ನೀಡಿದ ಸೂಚನೆ.

Advertisement

ಶೇ. 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡ 11 ರಾಜ್ಯಗಳ 40 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಜಿಲ್ಲೆಗಳು ಒಳ ಪಡುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗಿನ ವೀಡಿಯೋ ಸಂವಾದದಲ್ಲಿ ಪ್ರಧಾನಿ ಈ ಸಲಹೆ ಮಾಡಿದ್ದಾರೆ.

ಅಶಾ ಕಾರ್ಯಕರ್ತೆಯರು ಮತ್ತು ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಅತ್ಯಂತ ಕುಗ್ರಾಮದಲ್ಲಿರುವ ನಿವಾಸಿಗಳಿಗೆ ಕೂಡ ಲಸಿಕೆ ನೀಡುವಲ್ಲಿ ಶ್ರಮಿಸಿದ್ದಾರೆ. ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, “ನಿಮ್ಮ ಸಹಾಯ ದಿಂದಲೇ 100 ಕೋಟಿ ಡೋಸ್‌ ಲಸಿಕೆ ನೀಡುವ ಗುರಿ ಸಾಧಿಸಲಾಗಿದೆ’ ಎಂದರು.

ಇನ್ನು ಮನೆ ಮನೆಗೆ
ಇದುವರೆಗೆ ಜನರನ್ನು ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾ ಗಿದ್ದಾರೆ. ಮುಂದಿನ ದಿನಗಳಲ್ಲಿ ಅಶಕ್ತರಿಗೆ, ಮನೆಯಿಂದ ಹೊರಬರಲು ಸಾಧ್ಯವಾಗದವರಿಗೆ ಲಸಿಕೆ ನೀಡಲು ಅವರಿದ್ದಲ್ಲಿಗೇ ತೆರಳಬೇಕಾಗಿದೆ. ಈ ಮೂಲಕ ಎಲ್ಲ ಅರ್ಹ ವಯಸ್ಸಿನವರಿಗೆ ಲಸಿಕೆ ನೀಡುವ ಗುರಿ ಸಾಧಿಸಬೇಕು ಮತ್ತು ಸೋಂಕನ್ನು ಪೂರ್ಣ ಪ್ರಮಾಣದಲ್ಲಿ ಮಣಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ:3 ವರ್ಷಗಳಲ್ಲಿ 10000 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

Advertisement

ಧಾರ್ಮಿಕ ಮುಖಂಡರನ್ನು ಬಳಸಿ
ಇನ್ನೂ ಲಸಿಕೆಗೆ ಬಾಕಿ ಇರುವವರು ಹಾಕಿಸಿ ಕೊಳ್ಳು ವಂತೆ ಮತ್ತು ಹಲವು ಭಾಗಗಳಲ್ಲಿ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಲು ಆಯಾ ಪ್ರದೇಶದ ಧಾರ್ಮಿಕ ಮುಖಂಡರನ್ನು ಬಳಸಬೇಕು ಎಂದು ಪ್ರಧಾನಿ ಸಲಹೆ ಮಾಡಿದರು. ಕೆಲವು ಪ್ರದೇಶಗಳಲ್ಲಿ ಮೊದಲ ಡೋಸ್‌ ಪಡೆಯದವರೂ ಇದ್ದಾರೆ. ಅವರನ್ನು ಗುರುತಿಸಿ ಲಸಿಕೆ ಹಾಕುವ ಬಗ್ಗೆ ಮುತು ವರ್ಜಿ ವಹಿಸಬೇಕಾಗಿದೆ ಎಂದರು.

“100 ವರ್ಷಗಳಿಗೆ ಹೋಲಿಸಿದರೆ ಇದೊಂದು ದೊಡ್ಡ ಪಿಡುಗು ಮತ್ತು ಅದರಿಂದಾಗಿ ಹಲವು ರೀತಿಯ ಸವಾಲುಗಳು ಎದುರಾಗಿವೆ. ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದಲ್ಲಿ ಹಲವು ಪರಿಹಾರಗಳು, ವಿನೂತನ ಪದ್ಧತಿಗಳ ಆವಿಷ್ಕಾರದ ಮೂಲಕ ಸಮಸ್ಯೆ ನಿಭಾಯಿಸಲು ಕಲಿತಿದ್ದೇವೆ. ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸುವ ಪ್ರಮಾಣ ಹೆಚ್ಚಿಸಲು ಮತ್ತು ಜನರ ಮನವೊಲಿಕೆಗೆ ಹಲವು ವಿನೂತನ ಕ್ರಮಗಳನ್ನು ಸ್ಥಳೀಯ ಆಡಳಿತ ಕೈಗೊಳ್ಳಬೇಕು’ ಎಂದರು.

ಅ. 29ರಿಂದ ನ. 2ರ ವರೆಗೆ ಪ್ರಧಾನಿ ಇಟೆಲಿ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ಪ್ರವಾಸದಲ್ಲಿದ್ದರು. ನ. 2ರಂದು ಪ್ರವಾಸದಿಂದ ಸ್ವದೇಶಕ್ಕೆ ವಾಪಸಾದ ತತ್‌ಕ್ಷಣವೇ ಲಸಿಕೆ ಹಾಕಿಸುವಲ್ಲಿ ನಿರೀಕ್ಷಿತ ಸಾಧನೆ ಮಾಡದ ಜಿಲ್ಲೆಗಳ ಜಿಲ್ಲಾಧಿ ಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದು ಮಹತ್ವ ಪಡೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next