Advertisement

“ಭಾರತಕ್ಕೆ ಹಿಂದಿರುಗಿ”: ಸಿಂಗಾಪುರ ಕಾರು ಚಾಲಕನಿಂದ ಜನಾಂಗೀಯ ನಿಂದನೆ

12:36 AM Dec 24, 2023 | Team Udayavani |

ಸಿಂಗಾಪುರ: ಸಿಂಗಾಪುರದ ಕ್ಯಾಬ್‌ ಸೇವಾ ಸಂಸ್ಥೆ ಗ್ರ್ಯಾಬ್‌ನ ಚಾಲಕನೊಬ್ಬ ಭಾರತೀಯ ಪ್ರಯಾಣಿಕನ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದು, “ಯೂ ಇಂಡಿಯನ್‌- ಗೋ ಬ್ಯಾಕ್‌ ಟು ಇಂಡಿಯಾ” ಎಂದು ಸಂದೇಶ ಕಳುಹಿಸಿದ್ದಾನೆ.

Advertisement

ಈ ಸ್ಕ್ರೀನ್‌ ಶಾಟ್‌  ಈಗ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಟೀಕೆಗೆ ಗುರಿಯಾಗಿದೆ. ಪ್ರಯಾಣಿಕರೊಬ್ಬರು ಕ್ಯಾಬ್‌ ಬುಕ್‌ ಮಾಡಿದ್ದು, ಚಾಲಕ ರಸ್ತೆ ಸರಿ ಇಲ್ಲದ ಕಾರಣ ಕೆಲ ಸಮಯ ಕಾಯುವಂತೆ ಪ್ರಯಾಣಿಕರಿಗೆ ಸಂದೇಶ ನೀಡಿದ್ದಾರೆ. ಬಳಿಕ ಪ್ರಯಾಣಿಕ ಕಾಯುತ್ತೇನೆ ಎಂದಾಗ ಬೇಡ ಎಂದಿದ್ದಾನೆ. ಹಾಗಾದರೆ ರೈಡ್‌ ಕ್ಯಾನ್ಸಲ್‌ ಮಾಡಿ ಎಂದು ಪ್ರಯಾಣಿಕ ಕೇಳಿದ್ದಕ್ಕೆ ಯೂ ಇಂಡಿಯನ್‌ ಗೋ ಬ್ಯಾಕ್‌ ಟು ಇಂಡಿಯಾ ಎಂದು ಪ್ರತಿಕ್ರಿಯಿಸಿದ್ದಾನೆ. ಈ ವಿಚಾರವನ್ನು ಪ್ರಯಾಣಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಗ್ರ್ಯಾಬ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next