Advertisement

Gyanvapi Masjid: ಎಎಸ್‌ಐ ವರದಿ ಬಹಿರಂಗ ಕುರಿತು 24ರಂದು ನಿರ್ಧಾರ

08:50 PM Jan 06, 2024 | Team Udayavani |

ವಾರಣಾಸಿ: ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್‌ಐ) ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಜ.24ರಂದು ನಿರ್ಧರಿಸಲಾಗುವುದು ಎಂದು ವಾರಣಾಸಿ ನ್ಯಾಯಾಲಯ ಶನಿವಾರ ತಿಳಿಸಿದೆ.

Advertisement

ನ್ಯಾಯಾಧೀಶರಾದ ಎ.ಕೆ.ವಿಘ್ನೇಶ್‌ ಮತ್ತು ಮದನ ಮೋಹನ್‌ ಯಾದವ್‌ ಅವರಿದ್ದ ನ್ಯಾಯಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ತ್ವರಿತಗತಿಯ ನ್ಯಾಯಾಲಯದ ವಿಚಾರಣೆಯ ನಂತರ ಇದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ತ್ವರಿತಗತಿಯ ನ್ಯಾಯಾಲಯವು ಜ.19ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ. ವಾರಣಾಸಿ ನ್ಯಾಯಾಲಯದ ಕಳೆದ ವರ್ಷ ಜು.21ರ ಸೂಚನೆ ಮೇರೆಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಜ್ಞಾನವಾಪಿ ಮಸೀದಿ ಸಂಕೀರ್ಣದ ಸರ್ವೆ ಕಾರ್ಯ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next