Advertisement

ಅಕ್ರಮ ಕುರಿತು ದಾಖಲೆ ಕೊಟ್ಟರೆ ಉಡುಗೊರೆ’

07:05 AM Nov 02, 2017 | Team Udayavani |

ರಾಮನಗರ: ಪಾವಗಡ ಸೌರ ವಿದ್ಯುತ್‌ ಯೋಜನೆಯಲ್ಲಿ ಅಕ್ರಮ ಭೂಮಿ ಖರೀದಿಸಿರುವ ಬಗ್ಗೆ ಚನ್ನಪಟ್ಟಣ ಶಾಸಕ
ಸಿ.ಪಿ.ಯೋಗೇಶ್ವರ್‌ ಮಾಡಿರುವ ಆರೋಪವನ್ನು ಸಚಿವ ಡಿ.ಕೆ.ಶಿವಕುಮಾರ್‌ ಸವಾಲಾಗಿ ಸ್ವೀಕರಿಸಿದ್ದು, “ಆರೋಪ
ಸಾಬೀತಾದರೆ ತಾವು ಸಿ.ಪಿ.ಯೋಗೇಶ್ವರ್‌ ಅವರಿಗೆ ಉಡುಗೊರೆ ನೀಡುವುದಾಗಿ’ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮ ವಿರುದ್ಧದ ಆರೋಪಕ್ಕೆ ಸೂಕ್ತ ದಾಖಲೆ ಕೊಟ್ಟು ಸಾಬೀತು ಪಡಿಸಬೇಕು. ಅವರು ಯಶಸ್ವಿಯಾದರೆ ಆರೋಪಿಸಿದ ಇಡೀ ಆಸ್ತಿಯನ್ನು ಅವರಿಗೆ ಉಡುಗೊರೆಯಾಗಿ ಕೊಡುತ್ತೇನೆ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಸಿ.ಪಿ.ಯೋಗೇಶ್ವರ್‌ ತಮ್ಮ ವಿರುದ್ಧ ಪಿತೂರಿ ಮಾಡುತ್ತಲೇ ಬಂದಿದ್ದಾರೆ. ಅವರ ನಡೆ ಏನು ಅಂತ ತಮಗೆ ಗೊತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next