Advertisement

ನಮಗೆ ಬರಬೇಕಾದ ಬಾಕಿ ಹಣ ಮೊದಲು ಕೊಡಿ; ಕೇಂದ್ರಕ್ಕೆ ರಾಜ್ಯ ಸರ್ಕಾರ

03:36 PM Feb 03, 2018 | Sharanya Alva |

ಬೆಂಗಳೂರು: ದೇಶದಲ್ಲಿಯೇ ಕರ್ನಾಟಕ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿದೆ. ತೆರಿಗೆ ಸಂಗ್ರಹ ಮಾಡುವ ಕೆಲಸ ಮಾತ್ರ ಕೇಂದ್ರ ಸರಕಾರದ್ದು. ಫೈನಾನ್ಸ್ ಕಮಿಷನ್ ಪ್ರಕಾರ ಹಣ ಹಂಚಿಕೆ ಆಗುತ್ತೆ. ಕೇಂದ್ರ ಸರಕಾರ ಭಿಕ್ಷೆ ಕೊಡುತ್ತಿಲ್ಲ. ನಮ್ಮ ಹಣ ನಮಗೆ ಕೊಡುತ್ತಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತೆರಿಗೆ ಹಣದಲ್ಲಿ ದೇಶ ನಡೆಯುತ್ತದೆ. ಈ ಬಗ್ಗೆ ಅಮಿತ್ ಶಾ ಮೊದಲು ತಿಳಿದುಕೊಳ್ಳಲಿ. ಕನ್ನಡಿಗರಿಗೆ ಉದಾರತನ ತೋರುತ್ತಿದ್ದೇವೆ ಎಂಬುದನ್ನು ಮೊದಲು ಬಿಡಲಿ. ಶಾ ಅವರೇ ನೀವು ಕನ್ನಡಿಗರಿಗೆ ಕೃತಜ್ಞರಾಗಿರಿ ಎಂದರು.

ಕಳೆದ 3ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ 96,204 ಕೋಟಿ ಬರಬೇಕಾಗಿತ್ತು. ಆದರೆ ರಾಜ್ಯಕ್ಕೆ ನೀಡಿದ್ದು 84,651 ಕೋಟಿ ರೂಪಾಯಿ. ಹೀಗಾಗಿ ಅಮಿತ್ ಶಾ ಹೇಳಿರುವ ಸುಳ್ಳು ಮಾಹಿತಿ ಬಗ್ಗೆ ಕ್ಷಮೆ ಕೋರಲಿ ಎಂದರು.

ಸುಳ್ಳು ಹೇಳುವ ಗೊಬೆಲ್ಸ್ ಜಾಯಮಾನವನ್ನು ಬಿಜೆಪಿಯವರು ಮುಂದುವರಿಸಿದ್ದಾರೆ. ನಮಗೆ ಕೊಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ಕೊಡಲಿ ಎಂದು ಕೃಷ್ಣಬೈರೇಗೌಡ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next