Advertisement

ಹಳೆಯ ಪಿಂಚಣಿ ಸೌಲಭ್ಯ ನೀಡಿ

04:22 PM Dec 23, 2019 | Team Udayavani |

ಬಾದಾಮಿ: ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಪಿಂಚಣಿ ವಂಚಿತ ನೌಕರರ ಸಂಘ ತಹಶೀಲ್ದಾರ್‌ ಸುಹಾಸ ಇಂಗಳೆ ಅವರಿಗೆ ಮನವಿ ಸಲ್ಲಿಸಿತು.

Advertisement

ಸಂಘದ ತಾಲೂಕಾ ಅಧ್ಯಕ್ಷ ಎಚ್‌. ಎನ್‌.ಬಂಡಿವಡ್ಡರ ಮಾತನಾಡಿ, ಸರಕಾರ ಸ್ಪಂದಿಸದಿದ್ದರೆ ಬರುವ ಜ.10 ರಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೆ ಮಡಿ ಹೋರಾಟ ಹಮ್ಮಿಕೊಳ್ಳಲಾಗುವುದು. ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರು ನಿವೃತ್ತಿ ಜೀವನದ ಆಸರೆಯಾದ ಪಿಂಚಣಿ ಸೌಲಭ್ಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಹೋರಾಟ ಮಾಡಲಾಗುವುದು ಎಂದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಶಿಧರ ವಸ್ತ್ರದ, ಉಪಾಧ್ಯಕ್ಷ ರಮೇಶ ಲಮಾಣಿ, ಬಸವರಾಜ ಬಾಲಕವಾಡ, ಕಾರ್ಯದರ್ಶಿ ಭೀಮನಗೌಡ ಮುದಕನಗೌಡ್ರ, ಸಂಘಟನಾ ಕಾರ್ಯದರ್ಶಿ ಕಿರಣಕುಮಾರ ಹೂಗಾರ, ಖಜಾಂಚಿ ಸಿದ್ದಲಿಂಗೇಶ ಪವಾಡಶೆಟ್ಟಿ, ಗೋವಿಂದರಾಜ ದಾದ್ಮಿ, ಬಸವರಾಜ ಮಾದರ, ಮಲ್ಲಿಕಾರ್ಜುನ ಗೌಡರ, ಎಸ್‌.ಜಿ.ಅಕ್ಕಿ, ಯು.ಕೆ.ನಂದನೂರ, ವಿಜಯ ಲಮಾಣಿ ಸೇರಿದಂತೆ ತಾಲೂಕಿನ ಎಲ್ಲ ಅನುದಾನಿತ ಶಾಲೆಯಶಿಕ್ಷಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next