Advertisement

ಕತ್ತಿಗೆ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ

11:18 PM Aug 29, 2019 | Team Udayavani |

ಗೋಕಾಕ: ಹಿರಿಯ ಬಿಜೆಪಿ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಈಗಾಗಲೇ ಹೈ ಕಮಾಂಡ್‌ ಬಳಿ ಮನವಿ ಮಾಡಿಕೊಳ್ಳಲಾಗಿದೆ. ಶಾಸಕರಿದ್ದವರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಉಮೇಶ ಕತ್ತಿ ಅವರು ಪಕ್ಷದ ಹಿರಿಯ ನಾಯಕರು. ಅವರಿಗೆ ಸಚಿವ ಸ್ಥಾನ ಕೊಡಿಸಲು ನಾವೆಲ್ಲ ಪ್ರಯತ್ನಿಸುತ್ತೇವೆ. ಕತ್ತಿಯವರ ಬೆಂಬಲಕ್ಕೆ ನಾವೆಲ್ಲ ನಿಂತಿದ್ದೇವೆ ಎಂದರು.

ರಾಜ್ಯದಲ್ಲಿ ಯಾವುದೇ ಸರಕಾರವಿದ್ದರೂ ಜಾರಕಿಹೊಳಿ ಕುಟುಂಬದಿಂದ ಒಬ್ಬರು ಸಚಿವರಾಗಿ ಇರುತ್ತಿದ್ದರು. ಆದರೆ, ಈಗ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಆ ಪರಂಪರೆಯನ್ನು ದೇವರು ಮುಂದುವರಿಸುತ್ತಾನೆ. ನಮ್ಮ ಕುಟುಂಬದಿಂದ ಯಾರಾದರೂ ಒಬ್ಬರು ಸಚಿವರಾಗಿರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next