Advertisement

ಗುಡಿಸಲು ಜಾಗದ ಹಕ್ಕುಪತ್ರ ನೀಡಿ

12:54 PM May 16, 2017 | Team Udayavani |

ದಾವಣಗೆರೆ: ಆನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿನ ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಭವನದ ಮುಂದೆ ಸಾಂಕೇತಿಕ ಧರಣಿ ನಡೆಸಿದ್ದಾರೆ. 

Advertisement

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಗ್ರಾಮದ ಆಸ್ಪತ್ರೆ ಆವರಣದಲ್ಲಿ ದಲಿತರು ಗುಡಿಸಲು ಕಟ್ಟಿಕೊಂಡು ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಅವರಿಗೆ ಸ್ವಂತ ನಿವೇಶನ, ಮನೆ ಇಲ್ಲ. ಸ್ವಂತ ಸೂರು ಕಲ್ಪಿಸಲು ಕ್ರಮ ವಹಿಸಬೇಕು ಎಂದು ಕೋರಿದರು.

 ಬೇರೆ ಕಡೆ ಜಾಗ ಕೊಡಲು ಇದೀಗ ಎಲ್ಲೂ ಸಹ ಸರ್ಕಾರಿ ಜಮೀನು ಇಲ್ಲ. ಖಾಸಗಿ ಜಮೀನು ಖರೀದಿಸಿ, ಮನೆ ಕಟ್ಟಿಕೊಡಲು ಸದ್ಯ ಇರುವ ಯೋಜನೆಗಳಡಿ ಕಷ್ಟ ಸಾಧ್ಯ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಜಮೀನು ಇಟ್ಟುಕೊಂಡು ಉಳಿದ ಜಾಗದಲ್ಲಿ ದಲಿತರಿಗೆ ಸೂರು ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. 

ಸಮಿತಿಯ ಕಬ್ಬಳ್ಳಿ ಮೈಲಪ್ಪ, ಮೆಳ್ಳೇಕಟ್ಟೆ ಪರುಶುರಾಮ,  ಕೊಡಗನೂರು ಲಕ್ಷ್ಮಣ, ಆನಗೋಡು ಪ್ರಶಾಂತ್‌, ಅಳಗವಾಡಿ ನಿಂಗರಾಜ, ಗುಮ್ಮನೂರು ರಾಮಚಂದ್ರಪ್ಪ, ರೇವಣಸಿದ್ಧಪ್ಪ ಧರಣಿ ನೇತೃತ್ವ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮನವಿ ಸೀಕರಿಸಿ, ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next