Advertisement

ನೇಕಾರ ಸಮುದಾಯಕ್ಕೆ ಬಿಜೆಪಿ ಟಿಕೆಟ್‌ ಕೊಡಿ: ಬ್ಯಾನರ್ ಹಿಡಿದು ಪ್ರತಿಭಟನೆ

06:25 PM Apr 02, 2023 | Team Udayavani |

ರಬಕವಿ-ಬನಹಟ್ಟಿ: ಬೆಂಗಳೂರಿನ ಗೋಲ್ಡನ್ ಪ್ಯಾಲೇಸ್ ರೆಸಾರ್ಟ್ ನಲ್ಲಿ ನಡೆಯಿತ್ತಿರುವ ಬಿಜೆಪಿ ಚುನಾವಣೆ ರಾಜ್ಯ ಕಾರ್ಯಕಾರಣಿ ಸಭೆಯ ಮುಂಭಾಗದಲ್ಲಿ ತೇರದಾಳ ಮತಕ್ಷೇತ್ರಕ್ಕೆ ಈ ಬಾರಿ ಸ್ಥಳೀಯ ನೇಕಾರರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಭಾನುವಾರಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ, ”ಕ್ಷೇತ್ರದಲ್ಲಿನ ವಾಸ್ತವ ಅರಿತು ಈ ಬಾರಿ ಟಿಕೆಟ್ ನೀಡಬೇಕು. ಶೇ.40 ರಷ್ಟು ನೇಕಾರ ಸಮುದಾಯವನ್ನೇ ಹೊಂದಿರುವ ತೇರದಾಳದಲ್ಲಿ ಬಹು ದಿನಗಳ ಬೇಡಿಕೆಯಾಗಿರುವದನ್ನು ಪಕ್ಷವು ಈಡೇರಿಸಬೇಕು. ಪಕ್ಷ ಗೆಲ್ಲಬೇಕಾದರೆ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ನಿಶ್ಚಿತವೆಂದರು.

ಈ ಬಾರಿ ಟಿಕೆಟ್ ಸ್ಥಳೀಯರಿಗೆ ನೀಡಿದ್ದೇ ಆದಲ್ಲಿ 30 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸುವುದು ಖಚಿತ. ಕ್ಷೇತ್ರದಲ್ಲಿ ನೇಕಾರರ ಸಮುದಾಯ ಕಾರ್ಯಕರ್ತರು ಸಾಕಷ್ಟು ರೊಚ್ಚಿಗೆದ್ದಿರುವ ಕಾರಣ ಅನಾವಶ್ಯಕವಾಗಿ ಮತ್ತೆ ಹಳಬರಿಗೆ ಟಿಕೆಟ್ ನೀಡಿದರೆ ರಾಜ್ಯ ಬಿಜೆಪಿ ಒಂದು ಶಾಸಕನನ್ನು ಕಳೆದುಕೊಳ್ಳುವದರಲ್ಲಿ ಅನುಮಾನವಿಲ್ಲ ಎಂದರು. ಪ್ರವೀಣ ಕೋಲಾರ, ಕುಮಾರ ಕದಂ, ಮಲ್ಲಿಕಾರ್ಜುನ ಸವದಿ, ರಮೇಶ ಮಂಡಿ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next