Advertisement

Lover: ಗೆಳೆಯನಿಗಾಗಿ ಪ್ರೇಯಸಿಯನ್ನೇ ಕೊಡುಗೆ ನೀಡಿದ!

11:13 AM Oct 05, 2023 | Team Udayavani |

ರಾಮನಗರ: ಸ್ನೇಹಕ್ಕಾಗಿ ಜೀವ ನೀಡಿರುವ ಘಟನೆ ಯನ್ನು ಕೇಳಿದ್ದೇವೆ. ಸ್ನೇಹಿತನಿಗೆ ಐಶ್ವರ್ಯವನ್ನು ನೀಡಿದ ಕೃಷ್ಣ-ಕುಚೇಲರ ಕಥೆ ಕೇಳಿದ್ದೇವೆ. ಸ್ನೇಹಿತನಿಗೆ ಸಾಮ್ರಾಜ್ಯ ನೀಡಿದ ದು ರ್ಯೋ ದನ ಕರ್ಣನ ಕಥೆ ಯನ್ನು ಕೇಳಿದ್ದೇವೆ. ಹೀಗೆ ಸ್ನೇಹ ಕ್ಕಾಗಿ ಹಣ, ಒಡವೆ, ಭೂಮಿ, ಮನೆ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಕೆಲವನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಭೂಪ ಸ್ನೇಹಕ್ಕಾಗಿ ತನ್ನ ಪ್ರೇಯಸಿ ಯನ್ನೇ ಉಡುಗೊರೆಯಾಗಿ ನೀಡಿರುವ ಅಪರೂಪದ ಘಟನೆ ಐಜೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹೌದು.., ಅಂತಿಮ ವರ್ಷದ ಬಿ.ಕಾಂ. ಓದಲು ನಗರಕ್ಕೆ ಬರುತ್ತಿದ್ದ ಗ್ರಾಮೀಣ ಪ್ರದೇಶದ ಯುವತಿಯನ್ನು ಮಂಜು(21) ಎಂಬಾತ ಪ್ರೀತಿಸುತ್ತಿದ್ದ. ಈಕೆ ಪರೀಕ್ಷೆ ಬರೆಯುತ್ತಿದ್ದ ವೇಳೆ ಪರೀಕ್ಷೆಯಿಂದ ಅರ್ಧಕ್ಕೆ ಎಬ್ಬಿಸಿ ಕರೆದುಕೊಂಡು ಬಂದ ಪ್ರಿಯಕರ ಮಂಜು ಯುವತಿಯನ್ನು ತನ್ನ ಸ್ನೇಹಿತ ರವಿ(33) ಎಂಬುವನಿಗೆ ಗಿಫ್ಟ್‌ ನೀಡಿದ್ದಾನೆ.!

ಮದುವೆಯಾಗಿದ್ದ ರವಿ: ನಾಲ್ಕು ವರ್ಷಗಳ ಹಿಂದೆ ರವಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಕಾರಣಾಂತರಗಳಿಂದ ಮದುವೆಯಾಗಿದ್ದ ಯುವತಿ ಈತನನ್ನು ಬಿಟ್ಟು ಹೋಗಿದ್ದಳು. ಆತ್ಮೀಯ ಸ್ನೇಹಿñ ‌ನಾದ ಮಂಜು ಬಳಿ ನನಗೆ ನಿನ್ನ ಪ್ರೇಯಸಿಯನ್ನು ಬಿಟ್ಟು ಕೊಡು, ನೀನು ಚೆನ್ನಾಗಿದ್ದೀಯಾ ನಿನಗೆ ಬೇರೆ ಯುವತಿ ಸಿಗುತ್ತಾಳೆ. ನನಗೆ ಯಾರು ಸಿಗುತ್ತಾರೆ ಎಂದು ಪುಸಲಾ ಯಿಸಿ ದ್ದಾನೆ. ಸ್ನೇಹಿತನ ಮಾತಿಗೆ ಮನ್ನಣೆ ನೀಡಿದ ಮಂಜು ತನ್ನ ಪ್ರೇಯಸಿಯನ್ನು ಉಡುಗೊರೆಯಾಗಿ ರವಿಗೆ ನೀಡಲು ಒಪ್ಪಿದ್ದಾನೆ.

ಉಡುಗೊರೆ ನೀಡಿ ಕಂಬಿ ಎಣಿಸುವಂತಾಯಿತು: ಇನ್ನು ಯುವತಿಯನ್ನು ಮದುವೆ ಯಾಗಿ ರುವುದಾಗಿ ಹೇಳಿದ ಮಂಜು ಯುವತಿಯೊಂದಿಗೆ ರಾತ್ರೋರಾತ್ರಿ ಚಾಮರಾಜನಗರದ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಸಂಬಂಧಿಕರು ಇವರನ್ನು ಬೆಳಗ್ಗೆ ಬಾ ಎಂದು ಕಳುಹಿಸಿದ್ದಾರೆ. ಅಲ್ಲಿಂದ ಶಿರಾದಲ್ಲಿ ತಾನು ಕೆಲಸ ಮಾಡುತ್ತಿದ್ದ ಮಾಲೀಕನ ಬಳಿ ಹೋಗಿ ಅವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಈತ ಆಶ್ರಯ ಪಡೆದಿದ್ದಾನೆ. ಮಗಳು ಕಾಣೆಯಾಗುತ್ತಿದ್ದಂತೆ ಆತಂಕಗೊಂಡು ಐಜೂರು ಪೊಲೀಸ್‌ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಯುವತಿಯನ್ನು ಶಿರಾ ಬಳಿ ಇರಿಸಿರುವ ಮಾಹಿತಿ ಆರೋಪಿಗಳ ದೂರವಾಣಿ ಸಂಖ್ಯೆಯ ಟವರ್‌ ಲೋಕೇಷನ್‌ ಆಧಾರದ ಮೇಲೆ ಪತ್ತೆಯಾಗಿದೆ.

ನ್ಯಾಯಾಂಗ ಬಂಧನಕ್ಕೆ: ತಕ್ಷಣ ಆರೋಪಿಯನ್ನು ಬಂಧಿಸಿ ಯುವತಿಯನ್ನು ಕರೆತಂದು ವಿಚಾರಣೆ ನಡೆಸಿದಾಗ, ಅಪಹರಣ ಮಾಡಿರುವ ವೃತ್ತಾಂತ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಆರೋಪಿಗಳು ಪೊಲೀಸರ ಮುಂದೆ ಪ್ರೇಯಸಿ ಯನ್ನು ಗಿಫ್ಟ್‌ ನೀಡಿರುವ ಸಂಗತಿ ಅನಾವರಣ ಗೊಂಡಿದೆ. ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಿರುವ ಪೊಲೀಸರು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಪ್ರೇಯಸಿಗೆ ಬೆದರಿಕೆ:

ಅದರಂತೆ ತಾನು ಪ್ರೀತಿಸುತ್ತಿದ್ದ 19 ವರ್ಷದ ಯುವತಿಯನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಬಂದ ಮಂಜು ತನ್ನ ಸ್ನೇಹಿತ ರವಿಗೆ ನೀಡಿ, ಆತನ ಕೈಯಿಂದ ಯುವತಿಗೆ ದಾರವೊಂದನ್ನು ಕಟ್ಟಿಸಿ ನಿಮ್ಮಿಬ್ಬರ ಮದುವೆಯಾಗಿದೆ. ನೀನು ಅವನು ಹೇಳಿದಂತೆ ಕೇಳಬೇಕು ಎಂದು ತಿಳಿಸಿದ್ದಾನೆ. ಇನ್ನು ಈಕೆಯೊಂದಿಗೆ ಸುತ್ತಾಡಿದ ಕ್ಷಣಗಳ ಪೋಟೋ ತೆಗದುಕೊಂಡಿದ್ದ ಮಂಜು, ಇದನ್ನು ಎಲ್ಲಾ ಕಡೆ ಪೋಸ್ಟ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next