Advertisement

ತುಂಡಾದ ವಿದ್ಯುತ್‌ ತಂತಿ ತಗಲಿ ಬಾಲಕಿ ಸಾವು; ತಾಯಿ ಆಸ್ಪತ್ರೆಗೆ

09:48 AM Oct 02, 2018 | |

ಕಾಸರಗೋಡು: ಗಾಳಿ ಮಳೆ ಮತ್ತು ಸಿಡಿಲಿನ ಆಘಾತಕ್ಕೆ ಮರ ಮುರಿದು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ ತುಂಡರಿಸಿದ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟ ಘಟನೆ ಕುಂಭ್ಡಾಜೆ  ಏತಡ್ಕದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಸಂಭವಿಸಿದೆ.

Advertisement

ಕುಂಭ್ಡಾಜೆ ಏತಡ್ಕದ ಜಯರಾಮ ಮೂಲ್ಯ ಅವರ ಪುತ್ರಿ ಏತಡ್ಕ ಯು.ಪಿ. ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ (6) ಮೃತ ಬಾಲಕಿ. ಜತೆಯಲ್ಲಿದ್ದ ತಾಯಿ ಜಯಂತಿ ಅವರೂ ವಿದ್ಯುತ್‌ ಆಘಾತಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಯಿಂದ ಮನೆಗೆ ಬಂದು ಚಹಾ ಕುಡಿದ ಬಳಿಕ ತಾಯಿಯೊಂದಿಗೆ ಹಿತ್ತಿಲಿನಲ್ಲಿ ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಗಾಳಿ ಮತ್ತು ಸಿಡಿಲಿನ ಆಘಾತಕ್ಕೆ ಮರ ಮುರಿದು ವಿದ್ಯುತ್‌ ತಂತಿಯ ಮೇಲೆ ಬಿತ್ತು. ವಿದ್ಯುತ್‌ ತಂತಿ ತುಂಡಾಗಿ ಬಿದ್ದಾಗ ಈ ಇಬ್ಬರಿಗೆ ವಿದ್ಯುತ್‌ ಶಾಕ್‌ ತಗಲಿತು. ಕೂಡಲೇ ಸ್ಥಳೀಯರು ವಿದ್ಯುತ್‌ ಸಂಪರ್ಕ ಕಡಿದು ಬದಿಯಡ್ಕದ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಬಳಿಕ ಕಾಸರಗೋಡಿನ ಜನರಲ್‌ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಸಾವು ಸಂಭವಿಸಿತ್ತು. ಬಾಲಕಿಯು ಹೆತ್ತವರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next