Advertisement

Reservation: ಮೀಸಲಿಗಾಗಿ ಬಾಲಕಿ ಆತ್ಮಹತ್ಯೆ

11:23 PM Nov 17, 2023 | Team Udayavani |

ಮುಂಬಯಿ: ಮರಾಠರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲು ನೀಡುವಂತೆ ಆಗ್ರಹಿಸಿ ಜಲ್ವಾದಲ್ಲಿ 14 ವರ್ಷದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸೋಮೇಶ್ವರ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

ಮನೆಯ ಕೊಠಡಿಯಲ್ಲಿ “ಮರಾಠ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವುದು ನನ್ನ ಒತ್ತಾಯ. ಈ ಮಾತುಗಳು ವ್ಯರ್ಥವಾಗಬಾರದು’ ಎಂದು ಬಾಲಕಿ ಬರೆದು ಇರಿಸಿದ್ದಾಳೆ ಎಂದು ಹೇಳಲಾಗಿರುವ ಪತ್ರವೂ ಸಿಕ್ಕಿದೆ. ಇತ್ತೀಚೆಗೆ ಮೀಸಲು ನೀಡುವ ವಿಚಾರದಲ್ಲಿ ಜಲಾ° ಮತ್ತಿತರ ಪ್ರದೇಶಗಳಲ್ಲಿ ಗಲಾಟೆ, ಹಿಂಸಾಚಾರ ಉಂಟಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್‌ಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದ ಬೆಳವಣಿಗೆಗಳು ನಡೆದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next