Advertisement

ಕೆಸಿಆರ್ ಹಿಂದೂ ಮುಕ್ತ ಬಿಹಾರ ಮಾಡಲು ನಿತೀಶ್ ಗೆ ಕಲಿಸಲಿ: ಗಿರಿರಾಜ್ ಸಿಂಗ್

01:20 PM Sep 01, 2022 | Team Udayavani |

ಪಾಟ್ನಾ : ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸಿಎಂ ನಿತೀಶ್ ಕುಮಾರ್ ಅವರಿಗೆ ಹಿಂದೂ ಮುಕ್ತ, ಪಿಎಫ್ ಐ ಯುಕ್ತ ಬಿಹಾರ ಮಾಡುವುದನ್ನು ಕಲಿಸಲಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಕಿಡಿ ಕಾರಿದ್ದಾರೆ.

Advertisement

ಕೆಸಿಆರ್ ಅವರು ನಿತೀಶ್ ಅವರನ್ನು ಭೇಟಿಯಾಗಿ ಬಿಜೆಪಿ ಮುಕ್ತ ಭಾರತ ಮಾಡುವುದು ಗುರಿ ಎಂದು ಹೇಳಿದ ಬೆನ್ನಲ್ಲೇ ಹಿರಿಯ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ತೀವ್ರ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ‘ಬಿಜೆಪಿ-ಮುಕ್ತ ಭಾರತ’ಕ್ಕೆ ಕರೆ ನೀಡಿದ ಕೆಸಿಆರ್-ನಿತೀಶ್ ಕುಮಾರ್ ಭೇಟಿ: ಏನಿದು ಪ್ರಮುಖ ರಂಗ?

ತೆಲಂಗಾಣ ಮತ್ತು ಹೈದರಾಬಾದ್‌ನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪಿಎಫ್‌ಐನ ‘ಸರ್ ತನ್ ಸೆ ಜುದಾ’ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಟಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಬಿಹಾರಕ್ಕೆ ಬಂದಿದ್ದಾರೆ ಎಂದು ಸಚಿವ ಸಿಂಗ್ ಆಕ್ರೋಶ ಹೋರ ಹಾಕಿದ್ದಾರೆ.

“ಕೆಸಿಆರ್ ಅವರು ನಿತೀಶ್ ಕುಮಾರ್ ಅವರಿಗೆ ತುಷ್ಟೀಕರಣದ ರಾಜಕೀಯ ಮತ್ತು ಹಿಂದೂ ಮುಕ್ತ ಭಾರತದ ಅಭಿಯಾನವನ್ನು ಕಲಿಸಲು ಬಂದಿದ್ದರು. ಪ್ರತಿಪಕ್ಷಗಳಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ. ಪ್ರಧಾನಿ ಅಭ್ಯರ್ಥಿ ಕೆಸಿಆರ್ ಅವರೇ? ನಿತೀಶ್ ಕುಮಾರ್ ಅವರೇ? ಮಮತಾ ಬ್ಯಾನರ್ಜಿ ಅಥವಾ ರಾಹುಲ್ ಗಾಂಧಿಯೇ?” ಎಂದು ಗಿರಿರಾಜ್ ಸಿಂಗ್ ವ್ಯಂಗ್ಯವಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next