Advertisement

Gilgit-Baltistan: ಗಿಲ್ಗಿಟ್‌-ಬಾಲ್ಟಿಸ್ತಾನ ಭಾರತಕ್ಕೆ ಸೇರ್ಪಡೆಗೊಳಿಸಲು ಪ್ರತಿಭಟನೆ!

08:14 PM Aug 31, 2023 | Team Udayavani |

ನವದೆಹಲಿ: ನೆರೆ ರಾಷ್ಟ್ರ ಪಾಕಿಸ್ತಾನ ಇತ್ತ ಭಾರತದ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್‌-ಬಾಲ್ಟಿಸ್ತಾನದಲ್ಲಿನ ನಾಗರಿಕರು ತಮ್ಮ ಪ್ರದೇಶವನ್ನು ಭಾರತದ ಜತೆಗೆ ಸೇರ್ಪಡೆಗೊಳಿಸಲು ಪಟ್ಟು ಹಿಡಿದು, ಪಾಕ್‌ ಆಡಳಿತದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಚಲೋ-ಚಲೋ ಕಾರ್ಗಿಲ್‌ ಎಂಬ ಘೋಷಗಳು ಮುಗಿಲು ಮುಟ್ಟಿದ್ದು, ಗಿಲ್ಗಿಟ್‌-ಬಾಲ್ಟಿಸ್ತಾನದಲ್ಲಿ ಈ ವರೆಗೆ ನಡೆದ ಅತಿದೊಡ್ಡ ಪ್ರತಿಭಟನೆ ಇದು ಎನ್ನಲಾಗಿದೆ. ಶಿಯಾ ಮುಸ್ಲಿಮರ ಧರ್ಮಗುರು ಅಘಾ ಬಕೀರ್‌ ಅಲ್‌ ಹುಸೇನಿ ಅವರು ಧಾರ್ಮಿಕ ಸಭೆಯಲ್ಲಿ ನೀಡಿದ ಪ್ರವಚನಗಳಲ್ಲಿ ಧರ್ಮನಿಂದನೆಯಾಗಿದೆ ಎಂದು ಆರೋಪಿಸಿ, ಅವರ ವಿರುದ್ಧ ಪಾಕಿಸ್ತಾನ ಧರ್ಮನಿಂದನೆ ಕಾನೂನು ಅನ್ವಯ ಕೇಸು ದಾಖಲಿಸಿ, ಬಂಧಿಸಲಾಗಿದೆ.

Advertisement

ಇದನ್ನು ಖಂಡಿಸಿ, ಸ್ಕದೂ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಧರ್ಮನಿಂದನೆಯಾಗಿದೆ ಎಂಬುದಕ್ಕಿಂತಲೂ ಬಕೀರ್‌ ಓರ್ವ ಶಿಯಾ ಸಮುದಾಯದ ಧರ್ಮಗುರು ಎಂದು ಅವರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಗಳು ಕೇಳಿಬಂದಿವೆ. ಪಾಕಿಸ್ತಾನದಲ್ಲಿ ಸುನ್ನಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದು, ಗಿಲ್ಗಿಟ್‌- ಬಾಲ್ಟಿಸ್ತಾನದಲ್ಲಿ ಶಿಯಾಗಳ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶಿಯಾ ಮುಸಲ್ಮಾನರನ್ನು ಗುರಿಯಾಗಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಸಂಬಂಧಿಸಿದಂತೆ ಸ್ಥಳೀಯ ನಾಯಕರು ಕೂಡ ಪಾಕ್‌ ಆಡಳಿತಕ್ಕೆ ಎಚ್ಚರಿಕೆ ನೀಡಿ, ನಾವು ಗಿಲ್ಗಿಟ್‌-ಬಾಲ್ಟಿಸ್ತಾನವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳುತ್ತೇವೆಂದು ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next