Advertisement

GHOST ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ

12:19 PM Oct 27, 2023 | Team Udayavani |

“ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ನಮ್ಮ ಚಿತ್ರ ಅತಿ ಹೆಚ್ಚು ಕಲೆಕ್ಷನ್‌ ಮಾಡಿದೆ…’ – ಹೀಗೆ ನೇರವಾಗಿ ಹೇಳಿದರು ನಿರ್ಮಾಪಕ ಸಂದೇಶ್‌. ಅವರು ಹೇಳಿದ್ದು “ಘೋಸ್ಟ್‌’ ಚಿತ್ರದ ಬಗ್ಗೆ. ಅವರ ಈ ಮಾತಿಗೆ ಕಾರಣವಾಗಿದ್ದು “ಘೋಸ್ಟ್‌’ ಚಿತ್ರದ ಸಕ್ಸಸ್‌ಮೀಟ್‌ ಹಾಗೂ ಅಲ್ಲಿ ಎದುರಾದ ಪ್ರಶ್ನೆ.

Advertisement

ಹೌದು, ಅ.19ರಂದು ಬಿಡುಗಡೆಯಾದ “ಘೋಸ್ಟ್‌’ ಚಿತ್ರ ಈಗ ಹಿಟ್‌ಲಿಸ್ಟ್‌ ಸೇರಿದೆ. ಪರಭಾಷಾ ಸ್ಟಾರ್‌ ಸಿನಿಮಾಗಳ ಸ್ಪರ್ಧೆಯೊಂದಿಗೆ ತೆರೆಕಂಡ ಈ ಚಿತ್ರ ಆ ಎಲ್ಲಾ ಚಿತ್ರಗಳನ್ನು ಬದಿಗೆ ಸರಿಸಿ ಮುನ್ನಡೆ ಸಾಧಿಸಿದೆ.

ಬಿಡುಗಡೆಯಾದ ದಿನದಿಂದಲೇ ಬಹುತೇಕ ಶೋಗಳು ಹೌಸ್‌ಫ‌ುಲ್‌ ಆಗುವ ಮೂಲಕ ನಿರ್ಮಾಪಕರ ಜೇಬು ದೊಡ್ಡಮಟ್ಟದಲ್ಲಿ ತುಂಬಿದೆ. ಆ ಖುಷಿಯನ್ನು ಹಂಚಿಕೊಳ್ಳಲು ಇಡೀ “ಘೋಸ್ಟ್‌’ ತಂಡ ಮಾಧ್ಯಮ ಮುಂದೆ ಬಂದಿತ್ತು.

ಈ ವೇಳೆ ಮಾತನಾಡಿದ ನಿರ್ಮಾಪಕ ಸಂದೇಶ್‌ ಎನ್‌, “ಸಿನಿಮಾ ಬಿಡುಗಡೆಗೆ ಮೊದಲೇ ನಾನು ಸೇಫ್ ಆಗಿದ್ದೆ. ಈಗ ಸಿನಿಮಾ ತೆರೆಕಂಡ ನಂತರವೂ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಚಿತ್ರದ ಕಲೆಕ್ಷನ್‌ ಕುರಿತಾದ ಅಂಕಿ-ಅಂಶಗಳನ್ನು ಶೀಘ್ರದಲ್ಲಿ ನೀಡುತ್ತೇನೆ. ಆದರೆ, ಒಂದು ಹೇಳಲು ಬಯಸುತ್ತೇನೆ, ಈ ವರ್ಷ ತೆರೆಕಂಡ ಎಲ್ಲಾ ಸಿನಿಮಾಗಳಿಗಿಂತ “ಘೋಸ್ಟ್‌’ ಸಿನಿಮಾ ಜಾಸ್ತಿ ಕಲೆಕ್ಷನ್‌ ಮಾಡಿದೆ. ಮುಂದೆ ಈ ಚಿತ್ರದ ಪಾರ್ಟ್‌-2′ ಕೂಡಾ ಮಾಡುತ್ತಿದ್ದೇವೆ’ ಎನ್ನುವ ಮೂಲಕ “ಘೋಸ್ಟ್‌’ ದಸರಾ ವಿನ್ನರ್‌ ಎಂದು ಘೋಷಿಸಿದರು.

ನಟ ಶಿವರಾಜ್‌ಕುಮಾರ್‌ ಕೂಡಾ ಚಿತ್ರದ ಗೆಲುವಿನಿಂದ ಖುಷಿಯಾಗಿದ್ದಾರೆ. “ನಿರ್ದೇಶಕ ಶ್ರೀನಿ ಬಂದು ಈ ಸಿನಿಮಾದ ಒನ್‌ಲೈನ್‌ ಹೇಳಿದಾಗಲೇ ನನಗೆ ಇಷ್ಟವಾಯಿತು. ಚಿತ್ರದ ಟೈಟಲ್‌ “ಘೋಸ್ಟ್‌’ ಎಂದಾಗ ಖುಷಿಯಿಂದ ಒಪ್ಪಿಕೊಂಡೆ. ಇದೊಂದು ಬೇರೆ ತರಹದ ಪ್ರಯತ್ನ. ಈ ಸಿನಿಮಾ ನನ್ನೊಬ್ಬ ನಿಂದ ಆಗಿಲ್ಲ. ಇಡೀ ತಂಡದ ಸಹಕಾರದಿಂದ ಆಗಿದೆ. ಮುಖ್ಯವಾಗಿ ನಿರ್ಮಾಪಕ ಸಂದೇಶ್‌ ಅವರ ಸಿನಿಮಾ ಪ್ರೀತಿ ಕಾರಣ. ಅವರ ಬ್ಯಾನರ್‌ನಲ್ಲಿ ನಾನು ಮಾಡುತ್ತಿರುವ 3ನೇ ಸಿನಿಮಾವಿದು’ ಎನ್ನುತ್ತಾ ಸಿನಿಮಾದ ಗೆಲುವಿಗೆ ಸಹಕರಿಸಿದ ಎಲ್ಲರನ್ನು ನೆನೆದರು.

Advertisement

ಹಿರಿಯ ಕಲಾವಿದರಾದ ದತ್ತಣ್ಣ, ಅಭಿಜಿತ್‌, ವಿಜಯ ಲಕ್ಷ್ಮೀ ಸಿಂಗ್‌ ಸಿನಿಮಾದಲ್ಲಿ ಭಾಗಿಯಾದ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ, ಛಾಯಾಗ್ರಾಹಕ ಮಹೇಂದ್ರ ಸಿಂಹ, ಕಲಾ ನಿರ್ದೇಶಕ ಮೋಹನ್‌ ಬಿ ಸೇರಿದಂತೆ ಇಡೀ ತಂಡ ಖುಷಿ ಹಂಚಿಕೊಂಡಿತು. ಈ ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದು, ಶಿವರಾಜ್‌ಕುಮಾರ್‌ ಕೊಟ್ಟ ಪ್ರೋತ್ಸಾಹದ ಬಗ್ಗೆ ಮಾತನಾಡಿದರು.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next