Advertisement

ರೆಡಿಯಾಗುತ್ತಿದೆ “ಏರೆಗಾವುಯೇ ಕಿರಿಕಿರಿ’

11:54 PM Jul 31, 2019 | mahesh |

ರೋಶನ್‌ ವೇಗಸ್‌ ನಿರ್ಮಿಸುತ್ತಿರುವ ರಾಮ್‌ ಶೆಟ್ಟಿ ನಿರ್ದೇಶನದ ‘ಏರೆಗಾವುಯೇ ಕಿರಿಕಿರಿ’ ಸಿನೆಮಾ ಎಡಿಟಿಂಗ್‌ ಕೊನೆಯ ಹಂತದಲ್ಲಿದೆ. ಈ ಸಿನೆಮಾದ ಶೂಟಿಂಗ್‌ ಬ್ರಹ್ಮಾವರದಲ್ಲಿ ಎರಡು ಹಂತಗಳಲ್ಲಿ ನಡೆದಿತ್ತು. ಹಾಸ್ಯ ಮನರಂಜನೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಈ ಸಿನೆಮಾದ ಮೂಲಕ ನೀಡುವ ಪ್ರಯತ್ನವನ್ನು ರಾಮ್‌ ಶೆಟ್ಟಿ ಮಾಡಿದ್ದಾರೆ.

Advertisement

ನವೀನ್‌ ಡಿ. ಪಡೀಲ್, ಅರವಿಂದ ಬೋಳಾರ್‌, ಮಹಮ್ಮದ್‌ ನಹೀಮ್‌ ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್‌ ವೇಗಸ್‌, ಶ್ರದ್ಧಾ ಸಾಲ್ಯಾನ್‌, ಹರೀಶ್‌ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು, ಉಮೇಶ್‌ ಮಿಜಾರ್‌, ಸುಂದರ ರೈ ಮಂದಾರ, ದಿನೇಶ್‌ ಕೋಡಪದವು, ಪ್ರದೀಪ್‌ ಚಂದ್ರ, ಸುನೀಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್‌ ಭಂಡಾರಿ, ಶ್ರೀಜಿತ್‌ ವಸಂತ ಮುನಿ ಯಾಲ್, ಪ್ರಿಯಾಮಣಿ, ಪವಿತ್ರ ಶೆಟ್ಟಿ- ಡಿಬಿಸಿ ಶೇಖರ್‌, ಕುಶಿ ಚಂದ್ರಶೇಖರ್‌ ಮೊದಲಾದವರು ಸಿನೆಮಾದಲ್ಲಿದ್ದಾರೆ. ರಾಮ್‌ದಾಸ್‌ ಸಸಿಹಿತ್ಲು ಚಿತ್ರದ ಸಹನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣ ರವಿಚಂದನ್‌ ಅವರದ್ದು. ಚಿತ್ರಕ್ಕೆ ವಿ. ಮನೋಹರ್‌ ಸಂಗೀತ ನೀಡಿದ್ದಾರೆ. ಚಿತ್ರಕತೆ ಸಚಿನ್‌ ಶೆಟ್ಟಿ ಕುಂಬ್ಳೆ ಅವರದ್ದಾಗಿದ್ದು, ಸಂಭಾಷಣೆ-ಸಾಹಿತ್ಯ ಡಿಬಿಸಿ ಶೇಖರ್‌ ಅವರು ನೀಡಿದ್ದಾರೆ. ಸಂಕ ಲನ ನಾಸಿರ್‌ ಹಕೀಮ್‌, ಮದನ್‌ ಹರಿಣಿ ನೃತ್ಯ ಸಂಯೋಜಿಸಿದ್ದರೆ, ಮಾಸ್‌ಮಾದ ಸಾಹಸ ನಿರ್ದೇಶಕರು. ಸಹ ನಿರ್ದೇಶನ ರಾಮ್‌ ದಾಸ್‌ ಸಸಿಹಿತ್ಲು, ಕಲಾ ನಿರ್ದೇಶನ ದೇವಿ ಪ್ರಕಾಶ್‌, ಮೇಕಪ್‌ ಜೆ.ಎನ್‌. ಅಶೋಕ್‌, ವಸ್ತ್ರಾಲಂಕಾರ ರಾಮ್‌ ಕುಮಾರ್‌, ಸ್ಟಿಲ್ ರಾಮ್‌ಪ್ರಸಾದ್‌, ನಿರ್ಮಾಣ ನಿರ್ವಹಣೆ -ಶಿವಾರ್ಜುನ್‌ ದಿನೇಶ್‌ ಜೋಗಿ, ಕಾರ್ಯಕಾರಿ ನಿರ್ಮಾ ಪಕರು -ನಿಕ್ಷಿತ್‌ರಾವ್‌ ನಿಧಿರಾವ್‌ ಚಿತ್ರತಂಡದ ಜತೆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next