Advertisement

ಆಧಾರ್‌ ಪಡೆದು ರಸಗೊಬ್ಬರ ಕೊಡಿ

07:30 PM Sep 21, 2020 | Suhan S |

ಕಂಪ್ಲಿ: ತಾಲೂಕಿನ ರಸಗೊಬ್ಬರ ಮಾರಾಟಗಾರರು ರಸಗೊಬ್ಬರವನ್ನು (ಪಿಓಎಸ್‌) ಪಾಯಿಂಟ್‌ ಆಫ್‌ ಸೇಲ್‌ ಮಸೀನ್‌ನಲ್ಲಿ ನಮೂದಿಸಿದ ನಂತರವೇ ರಸಗೊಬ್ಬರವನ್ನು ರೈತರಿಗೆ ಮಾರಾಟ ಮಾಡಬೇಕೆಂದು ಕಂಪ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ ತಿಳಿಸಿದರು.

Advertisement

ಅವರು ತಾಲ್ಲೂಕಿನ ದೇವಸಮುದ್ರ ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಮಾರಾಟ ಮಾಡುವಾಗ ರೈತರಿಂದ ಆಧಾರ್‌ಕಾರ್ಡ್‌ ಸಂಖ್ಯೆಗಳನ್ನು ಪಡೆದುಕೊಂಡು ಅಧಿಕೃತ ರಸೀದಿಗಳನ್ನು ನೀಡಿ ಪಾಯಿಂಟ್‌ ಆಫ್‌ ಸೇಲ್‌ ಮಸೀನಿನಲ್ಲಿ ದಾಖಲಿಸಿ ರಸಗೊಬ್ಬರವನ್ನು ಮಾರಾಟ ಮಾಡಬೇಕು. ಪಿಒಎಸ್‌ ಯಂತ್ರದಲ್ಲಿನ ದಾಖಲೆಗೂ ಮಳಿಗೆ ಹಾಗೂ ಗೋದಾಮಿನಲ್ಲಿರುವ ರಸಗೊಬ್ಬ ದಾಸ್ತಾನು ಸರಿಯಾಗಿ ತಾಳೆ ಹೊಂದಬೇಕು. ಆದರೆ ಕೆಲವು ಮಾರಾಟಗಾರರು ಪಿಒಎಸ್‌ ಯಂತ್ರದಲ್ಲಿ ದಾಖಲಿಸದೇ ಅಧಿಕೃತ ರಸೀದಿಯನ್ನೂ

ನೀಡದೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಕೇಳಿಬರುತ್ತಿದ್ದು, ಇಂತಹ ಪ್ರಕರಣಗಳು ಕಂಡು ಬಂದರೆ ಅಂತವರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಈಗಾಗಲೇ ತಾಲೂಕಿನ 7 ರಸಗೊಬ್ಬರ ಮಾರಾಟ ಅಂಗಡಿಗಳ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ವಿವರಿಸಿದರು. ಈ  ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ, ತಾಂತ್ರಿಕ ಉತ್ತೇಜಕ ಫಕ್ಕೀರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next