Advertisement

ನಿತ್ಯ ದೋಣಿಯಲ್ಲಿ ತೆರಳಿ ಸರ್ಕಾರದ ಸಶಸ್ತ್ರ ಕಾವಲು!

02:22 PM Oct 12, 2019 | Suhan S |

ಹಾವೇರಿ: ಕಳೆದ ಒಂದು ವಾರದಿಂದ ಸಂಜೆ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿಯ ಕೆರಿಮತ್ತಿಹಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿ ಸುತ್ತ ಮೂರ್‍ನಾಲ್ಕು ಅಡಿಯಷ್ಟು ನೀರು ಆವರಿಸಿದೆ.

Advertisement

ಕೆಲ ತಿಂಗಳ ಹಿಂದೆಯೇ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿಯನ್ನು ಹಳೆ ನಗರಸಭೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆಯಾದರೂ ಹಳೆ ಕಟ್ಟಡದಲ್ಲಿ ಸಶಸ್ತ್ರಗಳ ಸಂಗ್ರಹವಿದ್ದು, ಅದನ್ನು ಕಾಯಲು ಸಿಬ್ಬಂದಿ ನೀರಿನಲ್ಲಿಯೇ ಹೋಗಿ ಕಟ್ಟಡ ಕಾವಲು ಕಾಯಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಚೇರಿಯ ಪಕ್ಕದಲ್ಲಿನ ಕೆರೆ ದಂಡೆಯಲ್ಲಿ ಪೊಲೀಸ್‌ ವಸತಿ ಗೃಹಗಳಿದ್ದು, ಇಲ್ಲಿ ವಾಸಿಸುವ ಕುಟುಂಬಗಳೂ ಸಹ ಮಳೆ ನೀರು ತಮ್ಮ ಮನೆಗಳಿಗೆ ಯಾವಾಗ ನುಗ್ಗುತ್ತದೆಯೋ ಎಂಬ ಭೀತಿಯಲ್ಲಿಯೇ ದಿನ ಕಳೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next