Advertisement

ವಿಮಾ ಸೌಲಭ್ಯ ಪಡೆದುಕೊಳ್ಳಿ

12:45 PM Feb 09, 2022 | Team Udayavani |

ಬಸವಕಲ್ಯಾಣ: ಕಷ್ಟ ಕಾಲದಲ್ಲಿ ವಿಮಾ ಯೋಜನೆ ಸಹಾಯಕ್ಕೆ ಬರುತ್ತವೆ. ಹೀಗಾಗಿ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರು ವಿಮಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಟಿಐಇಸಿ ಸಂಯೋಜಕ ವೀರಾರೆಡ್ಡಿ ಹೇಳಿದರು.

Advertisement

ಹಾರಕೂಡ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ವಿಮಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬೀಮಾ (ವಿಮಾ) ಯೋಜನೆ ವಾರ್ಷಿಕ 330 ರೂ. ಕಂತು ಪಾವತಿಸಿದರೆ, 2 ಲಕ್ಷ ವಿಮೆ ಸೌಲಭ್ಯ ಪಡೆಯಬಹುದು. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ವರ್ಷಕ್ಕೆ 12 ರೂ. ಕಂತು ಪಾವತಿಸುವ ಮೂಲಕ 2 ಲಕ್ಷ ರೂ. ವಿಮಾ ಸೌಲಭ್ಯ ದೊರಯಲಿದೆ ಎಂದರು.

ಹಾರಕೂಡ ಬ್ಯಾಂಕ್‌ ವ್ಯವಸ್ಥಾಪಕ ಯೋಗೇಶ ಪಾಂಡೆ ವಿಮಾ ಯೋಜನೆಗಳಿಗೆ ಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡಿದರು. ನಂತರ ಕೂಲಿ ಕಾರ್ಮಿಕರಿಗೆ ವಿಮಾ ಯೋಜನೆಗಳ ನಮೂನೆಗಳು ತುಂಬಿಸಲಾಯಿತು. ಈ ವೇಳೆ ಪಿಡಿಒ ವಿಷ್ಣುಕಾಂತರೆಡ್ಡಿ, ಟಿಎಇ ಜಲೀಲ್‌ ಸಾಬ್‌, ವೆಂಕಟರಾವ್‌, ಮಲ್ಲಿಕಾರ್ಜುನ, ಡಿಇಒ ಶರಣು ಬಾಲಕಿಲೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next