Advertisement

ಪುತ್ರಿಯರಿಂದ ಜ.ರಾವತ್ ಚಿತಾಭಸ್ಮ ಗಂಗಾ ನದಿಯಲ್ಲಿ ವಿಸರ್ಜನೆ

04:01 PM Dec 11, 2021 | Team Udayavani |

ಹರಿದ್ವಾರ (ಉತ್ತರಾಖಂಡ): ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರ ಚಿತಾಭಸ್ಮವನ್ನು ಪುತ್ರಿಯರು ಶನಿವಾರ ಮಧ್ಯಾಹ್ನ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಿದರು.

Advertisement

ಇಂದು ಮುಂಜಾನೆ ಸಿಡಿಎಸ್ ಜನರಲ್ ರಾವತ್ ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಅವರು ತಮ್ಮ ಪೋಷಕರ ಚಿತಾಭಸ್ಮವನ್ನು ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಸ್ಮಶಾನದಿಂದ ಸಂಗ್ರಹಿಸಿ ಹರಿದ್ವಾರಕ್ಕೆ ತಂದು ಗಂಗಾನದಿಯಲ್ಲಿ ಮುಳುಗಿಸಿದರು.

ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಹರಿದ್ವಾರದ ವಿಐಪಿ ಘಾಟ್‌ನಲ್ಲಿ ರಾವತ್ ಪುತ್ರಿಯರನ್ನು ಭೇಟಿಯಾದರು.

ಶುಕ್ರವಾರ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಜನರಲ್ ಬಿಪಿನ್ ರಾವತ್ ಅವರನ್ನು ಪತ್ನಿ ಮಧುಲಿಕಾ ರಾವತ್ ಅವರೊಂದಿಗೆ ಒಂದೇ ಚಿತೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next