Advertisement

ಕಬಡ್ಡಿ ಸಂಸ್ಥೆಯಿಂದ ಗೆಹಲೋಟ್ ಪದಚ್ಯುತಿ

06:00 AM Aug 04, 2018 | Team Udayavani |

ಹೊಸದಿಲ್ಲಿ: ದೇಶದ ಕಬಡ್ಡಿ ಇತಿಹಾಸದಲ್ಲಿಯೇ ಹಿಂದೆಂದೂ ಕಂಡು ಕೇಳರಿಯದ ಭಾರೀ ಬದ ಲಾವಣೆಯಾಗಿದೆ. ದಿಢೀರ್‌ ಬೆಳವಣಿಗೆಯಲ್ಲಿ ಎಕೆಎಫ್ಐ (ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾ) ಅಧ್ಯಕ್ಷೆ ಸ್ಥಾನದಿಂದ ಮೃದುಲಾ ಬದೌರಿಯಾ  ಮತ್ತು ಆಜೀವ ಅಧ್ಯಕ್ಷ ಜನಾರ್ದನ್‌ ಸಿಂಗ್‌ ಗೆಹಲೋಟ್ ಅವರನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ಪದಚ್ಯುತಿ ಗೊಳಿಸಿದೆ. ಮಾತ್ರವಲ್ಲ ಮುಂದಿನ 3 ತಿಂಗಳ ಒಳಗಾಗಿ ಚುನಾವಣೆ ನಡೆಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೂಚನೆ ನೀಡಿದೆ.

Advertisement

ಕಳೆದ 13 ವರ್ಷಗಳಿಂದ ವಿಚಾರಣೆಯಲ್ಲಿದ್ದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್‌ ಒಳಗೊಂಡಿದ್ದ ಪೀಠ ವಿಚಾರಣೆ ನಡೆಸಿತು. ಗೆಹಲೋಟ್  ಆಜೀವ ಅಧ್ಯಕ್ಷ ಸ್ಥಾನ ಹೊಂದಿರುವುದು ಕಾನೂನು ಬಾಹಿರ. ಬದೌರಿಯಾ ಅವರು ಮೇ 19, 2013 ಮತ್ತು ಎ. 23, 2017ರಲ್ಲಿ ನಡೆಸಿದ ಆಡಳಿತ ಸಂಪೂರ್ಣವಾಗಿ ಅಸಿಂಧು. ಈ ಅವಧಿಯಲ್ಲಿ ಸರಕಾರದಿಂದ ಪಡೆದ ಅನುದಾನವನ್ನೆಲ್ಲ ಮತ್ತೆ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ. ಜನಾರ್ಧನ್‌ ಸಿಂಗ್‌ ಗೆಹಲೋಟ್  ಮತ್ತು ಅವರ ಕುಟುಂಬ ದೇಶದ ಕಬಡ್ಡಿಯನ್ನು 28 ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದರು. ತಮಗೆ ಹೇಗೆ ಬೇಕೋ ಹಾಗೆ ಕಬಡ್ಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. 

ಆಡಳಿತಾಧಿಕಾರಿ ನೇಮಕ
ಬಿಸಿಸಿಐನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದಾಗ ಸುಪ್ರೀಂ ಕೋರ್ಟ್‌ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೇ ಮಾದರಿಯಲ್ಲಿ ದಿಲ್ಲಿ ಹೈಕೋರ್ಟ್‌ ಕಬಡಿಡೂ ಆಡಳಿತಾಧಿಕಾರಿ ನೇಮಕ ಮಾಡಿದೆ. ನಿವೃತ್ತ ಐಎಎಸ್‌ ಅಧಿಕಾರಿ ಸನತ್‌ ಕೌಲ್‌ ಮುಂದಿನ ಎಕೆಎಫ್ಐ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next