Advertisement

ಗೋಲ್ಡನ್ ಸ್ಟಾರ್ ಈಗ ಕನ್ನಡಪ್ರೇಮಿ ಶಂಕರ!

09:23 AM Sep 26, 2019 | Team Udayavani |

ವಿಜಯ್ ನಾಗೇಂದ್ರ ನಿರ್ದೇಶನ ಮಾಡಿರೋ ಚೊಚ್ಚಲ ಚಿತ್ರ ಗೀತಾ. ಭರ್ಜರಿ ನಿರೀಕ್ಷೆಗಳ ಒಡ್ಡೋಲಗದಲ್ಲಿ ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ತೆರೆ ಕಾಣುತ್ತಿದೆ. ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ಸೈಯದ್ ಸಲಾಮ್ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರೋ ಮೊದಲ ಚಿತ್ರವಿದು. ತಮ್ಮ ಹೋಂ ಬ್ಯಾನರಿನ ಗೀತಾ ಗಣೇಶ್ ಪಾಲಿಗೆ ಎಲ್ಲ ಕೋನಗಳಿಂದಲೂ ಸ್ಪೆಷಲ್. ಇದರ ಕಥೆಯೇ ವಿಭಿನ್ನವಾದದ್ದು.

Advertisement

ನಿರ್ದೇಶಕ ವಿಜಯ್ ನಾಗೇಂದ್ರ ಅವರ ಪಾಲಿಗೂ ಕೂಡಾ ಇದು ಮೊದಲ ಚಿತ್ರವೇ. ಆದರೆ ಒಂದಷ್ಟು ಸಿನಿಮಾ ಮಾಡಿ ಅನುಭವವಿರುವ ನಿರ್ದೇಶಕರೇ ಮುಟ್ಟಲು ಹಿಂದೇಟು ಹಾಕುವಂಥಾ ಕಥೆಯನ್ನವರು ಆರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಹಿಂದೆಂದೂ ನಟಿಸಿರದಂಥಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರು ಗೀತಾ ಚಿತ್ರದಲ್ಲಿ ಕನ್ನಡ ಪ್ರೇಮಿ ಶಂಕರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕನ್ನಡಕ್ಕಾಗಿ ಹೋರಾಟ ನಡೆಸುವ ಅವರ ಪಾತ್ರದ ಚಹರೆ ಈಗಾಗಲೇ ಬಿಡುಗಡೆಗೊಂಡಿರೋ ಟ್ರೇಲರ್ ಮೂಲಕ ಸ್ಪಷ್ಟವಾಗಿಯೇ ಜಾಹೀರಾಗಿದೆ. ಗೀತಾ ಬಗ್ಗೆ ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಈ ತೆರನಾದ ಕುತೂಹಲ ಮೂಡಿಕೊಳ್ಳಲೂ ಕೂಡಾ ಅದೇ ವಿಚಾರ ಪ್ರಧಾನ ಕಾರಣವಾಗಿದೆ.

ಗಣೇಶ್ ವ್ಯಕ್ತಿಗತವಾಗಿಯೂ ಕನ್ನಡದ ಬಗ್ಗೆ ಅಪಾರವಾದ ಕಾಳಜಿ, ಪ್ರೀತಿ ಹೊಂದಿರುವವರು. ಅವರಿಗೆ ಅದಕ್ಕುದಾದ ಪಾತ್ರವೇ ಗೀತಾದಲ್ಲಿ ಸಿಕ್ಕಿದೆ. ಅದು ಕನ್ನಡಿಗರೆಲ್ಲರ ನರನಾಡಿಗಳಲ್ಲಿಯೂ ಕನ್ನಡತನದ ಕಂಪನ್ನು ಪ್ರವಹಿಸುವಂತೆ ಮಾಡುವಂಥಾ ಪಾತ್ರ. ಕನ್ನಡಕ್ಕಾಗಿ ಶಶಕ್ತ ಹೋರಾಟವೊಂದನ್ನು ಮತ್ತೆ ಕಟ್ಟಲು ಸ್ಫೂರ್ತಿಯಾಗುವಂಥಾ ಕಥೆಯೂ ಇಲ್ಲಿದೆ. ಈ ಮೂಲಕ ಶಂಕರನಾಗಿರೋ ಗಣೇಶ್, ಶಂಕರ್‍ನಾಗ್ ಅವರ ಅಭಿಮಾನಿಯಾಗಿಯೂ ಕಾಣಿಸಿಕೊಂಡಿರಬಹುದೆಂಬ ವಿಚಾರವೂ ಈಗ ಚರ್ಚೆಗೀಡಾಗುತ್ತಿದೆ. ಅಂತೂ ಈ ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಹೊಸಾ ಇಮೇಜಿನೊಂದಿಗೆ ಮತ್ತಷ್ಟು ಹೊಳಪು ಪಡೆದುಕೊಳ್ಳುವ ದಟ್ಟ ಸೂಚನೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next