Advertisement

ಗುಂಡ್ಲುಪೇಟೆಗೆ ಗೀತಾ ಕಾಂಗ್ರೆಸ್‌ ಅಭ್ಯರ್ಥಿ

03:45 AM Feb 13, 2017 | Team Udayavani |

ಬೆಂಗಳೂರು/ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ದಿ.ಮಹದೇವ ಪ್ರಸಾದ್‌ ಪತ್ನಿ, ಗೀತಾ ಮಹದೇವಪ್ರಸಾದ್‌ ಅವರೇ ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದ
ರಾಮಯ್ಯ ಘೋಷಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಭಾನುವಾರ ನಡೆದ
ದಿ.ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಮಹಾಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮ್ಮ ಭಾಷಣದುದ್ದಕ್ಕೂ ಮಹದೇವಪ್ರಸಾದ್‌ ಅವರ ಗುಣಗಾನ ಮಾಡಿದ ಸಿದ್ದರಾಮಯ್ಯ, ಮಹದೇವಪ್ರಸಾದ್‌ ಅವರ ನಿಧನದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರಕ್ಕೆ ಅವರ ಪತ್ನಿ ಗೀತಾ ಅವರೇ ಪಕ್ಷದ ಅಭ್ಯರ್ಥಿ ಎಂದರು.

Advertisement

ಪತಿಯ ಕನಸ ಈಡೇರಿಸುವೆ: ಡಾ.ಗೀತಾ ಮಹದೇವ ಪ್ರಸಾದ್‌ ಮಾತನಾಡಿ, “ನನ್ನ ಪತಿಯ ಆಸೆಯಂತೆ ಅಭಿವೃದ್ಧಿ ಕನಸನ್ನು ಸಾಕಾರಗೊಳಿಸುತ್ತೇನೆ. ತಾವು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು. ಆ ಮೂಲಕ ತಾವು ಚುನಾವಣಾ ರಾಜಕಾರಣಕ್ಕೆ ಧುಮುಕುವ ಬಗ್ಗೆ ಸುಳಿವು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next