Advertisement

ನಮಸ್ಕರಿಸಿದ ಮಗುವಿಗೆ ಶೂ ಹಾಕಿದ ಗವಿಶ್ರೀ

12:23 AM Jan 08, 2020 | mahesh |

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಗರದಲ್ಲಿ ಮಂಗಳವಾರ ನಡೆದ ಲಕ್ಷ
ವೃಕ್ಷೊತ್ಸವ “ಜಾಗೃತಿ ಜಾಥಾ’ದಲ್ಲಿ ಪಾಲ್ಗೊಂಡ ಶಾಲಾ ಮಗುವಿಗೆ ಶೂ ಹಾಕುವ ಮೂಲಕ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆ ಮೆರೆದಿದ್ದಾರೆ.

Advertisement

ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಕಂಡ ಸರ್ಕಾರಿ ಶಾಲೆ ಬಾಲಕನೊಬ್ಬ ತನ್ನ ಶೂ ಬಿಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆದು, ಬಳಿಕ ಶೂ ಧರಿಸುತ್ತಿದ್ದ ವೇಳೆ ಶೂ ಬೇಗ ಧರಿಸಲು ಸಾಧ್ಯವಾಗದೇ ಪ್ರಯಾಸ ಪಡುತ್ತಿದ್ದ. ಇದನ್ನು ಗಮನಿಸಿದ ಶ್ರೀ, ತಾವೇ ಬಾಲಕನಿಗೆ ಶೂ ಹಾಕಿ ಲೇಸ್‌ ಕಟ್ಟಿ ಸರಿಪಡಿಸಿದರು. ಇದನ್ನು ನೋಡಿದ ಭಕ್ತರು ಶ್ರೀಗಳ ಸರಳತೆಗೆ ಮೂಕವಿಸ್ಮಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next