Advertisement

ಆಡದಿರುವುದು ಸ್ವತಃ ಗಂಭೀರ್‌ ನಿರ್ಧಾರ: ಶ್ರೇಯಸ್‌

07:30 AM Apr 29, 2018 | Team Udayavani |

ಹೊಸದಿಲ್ಲಿ: ಡೆಲ್ಲಿ-ಕೆಕೆಆರ್‌ ನಡುವೆ ಶುಕ್ರವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮಾಜಿ ನಾಯಕ ಗೌತಮ್‌ ಗಂಭೀರ್‌ ಅಚ್ಚರಿಯೆನ್ನುವಂತೆ ಹೊರಗುಳಿದಿದ್ದರು. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಬಗ್ಗೆ ಎದ್ದಿದ್ದ ಗೊಂದಲವನ್ನು ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಬಗೆಹರಿಸಿದ್ದಾರೆ. 

Advertisement

ಗಂಭೀರ್‌ ತಂಡದಿಂದ ಹೊರಗುಳಿಯಲು ನಾನು ಕಾರಣವಲ್ಲ, ಸ್ವತಃ ಅವರೇ ಈ ನಿರ್ಧಾರ ಮಾಡಿದ್ದರು. ತಂಡದ ಸೋಲಿನ ಹಿನ್ನೆಲೆಯಲ್ಲಿ ನಾಯಕತ್ವ ಬಿಟ್ಟ ಅವರು ಫಾರ್ಮ್ ಇಲ್ಲ ಎಂಬ ಕಾರಣಕ್ಕೆ ಪಂದ್ಯದಲ್ಲೂ ಆಡದಿರುವ ನಿರ್ಧಾರ ಮಾಡಿದರು. ಇದಕ್ಕೆ ಬಹಳ ಧೈರ್ಯ ಬೇಕು. ಈಗ ಅವರ ಮೇಲಿನ ಗೌರವ ಇನ್ನೂ ಹೆಚ್ಚಿದೆ ಎಂದು ಶ್ರೇಯಸ್‌ ಅಯ್ಯರ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next