Advertisement

ಗೌರಿ ಹತ್ಯೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

06:06 AM Jan 25, 2019 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರೋಪಿಗಳಿಗೆ ಬಾಡಿಗೆ ಮನೆ ಕೊಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೋಹನ್‌ ನಾಯಕ್‌ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌, ತೀರ್ಪು ಕಾಯ್ದಿರಿಸಿದೆ.

Advertisement

ಪ್ರಕರಣದ 11ನೇ ಆರೋಪಿ, ದಕ್ಷಿಣ ಕನ್ನಡದ ಸಂಪಾಜೆಯ ಮೋಹನ್‌ ನಾಯಕ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ನ್ಯಾ. ಬಿ.ಎ.ಪಾಟೀಲ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸುವುದಾಗಿ ಹೇಳಿತು.

ಪ್ರಮುಖ ಆರೋಪಿ ಅಮೋಲ್‌ ಕಾಳೆ ಸೂಚನೆಯ ಮೇರೆಗೆ ಮೋಹನ್‌, ಆಕ್ಯುಪಂಚರ್‌ ಕ್ಲಿನಿಕ್‌ ನಡೆಸುವ ಸೋಗಿನಲ್ಲಿ ಮೈಸೂರು ರಸ್ತೆಯ ಕುಂಬಳಗೋಡು ಬಳಿ ಬಾಡಿಗೆ ಮನೆಯೊಂದನ್ನು ಪಡೆದಿದ್ದ.

ಅದೇ ಮನೆಯಲ್ಲಿ ಗೌರಿ ಹಂತಕರ ತಂಡ ಸಭೆ ಸೇರುತ್ತಿತ್ತು ಹಾಗೂ ಹತ್ಯೆಗೆ ಬಳಕೆ ಮಾಡಿದ್ದ ಬೈಕ್‌ ನಿಲುಗಡೆ ಮಾಡಲಾಗಿತ್ತು ಎಂಬ ಆರೋಪದಲ್ಲಿ ವಿಶೇಷ ತನಿಖಾ ತಂಡ 2018ರ ಜು.18ರಂದು ಮೋಹನ್‌ ನಾಯಕ್‌ನನ್ನು ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next