Advertisement

Rahul Gandhi: ಗೌರಿ ಲಂಕೇಶ್‌ ಹತ್ಯೆ: ಹೈಕೋರ್ಟ್‌ಗೆ ರಾಹುಲ್‌ ಮೇಲ್ಮನವಿ

09:35 PM Oct 17, 2023 | Team Udayavani |

ಮುಂಬೈ: ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಆರ್‌ಎಸ್‌ಎಸ್‌ ಕಾರಣ ಎಂದು ಹೇಳಿದ್ದಕ್ಕೆ ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ವಜಾಗೊಳಿಸಲು ಸಂಸದ ರಾಹುಲ್‌ ಗಾಂಧಿ ಅರಿಕೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಮುಂಬೈನ ಸ್ಥಳೀಯ ಕೋರ್ಟ್‌ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

Advertisement

ನ್ಯಾ.ಎಸ್‌.ವಿ.ಕೊತ್ವಾಲ್‌ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದು, ಡಿ.5ರಂದು ಮುಂದಿನ ವಿಚಾರಣೆಗೆ ದಿನ ನಿಗದಿಪಡಿಸಿದೆ. 2017ರ ಸೆಪ್ಟೆಂಬರ್‌ನಲ್ಲಿ ನ್ಯಾಯವಾದಿ ಧ್ರುತಿಮಾನ್‌ ಜೋಶಿ ಎಂಬುವರು ಸಂಸದ ರಾಹುಲ್‌, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ವಿವಿಧ ಸಂದರ್ಭಗಳಲ್ಲಿ ಗೌರಿ ಲಂಕೇಶ್‌ ಹತ್ಯೆಗೆ ಆರ್‌ಎಸ್‌ಎಸ್‌ ಕಾರಣ ಎಂದು ಹೇಳಿದ್ದನ್ನು ಪ್ರಶ್ನಿಸಿ ದಾವೆ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next