Advertisement

Hindutva ವಾದಿಗಳಿಂದ ಗೌರಿ, ಕಲಬುರ್ಗಿ ಹತ್ಯೆ: ತಮಿಳುನಾಡು ಸಂಸದ

12:07 AM May 28, 2024 | Team Udayavani |

ಚೆನ್ನೈ: ಸನಾತನ ಭಯೋತ್ಪಾದಕರು ಶಸ್ತ್ರಾಸ್ತ್ರ ಗಳೊಂದಿಗೆ ಮುಕ್ತವಾಗಿ ಓಡಾಡುತ್ತಿದ್ದಾರೆ. ಅವರೇ ಗೌರಿ ಲಂಕೇಶ್‌, ಎಂ.ಎಂ. ಕಲಬುರ್ಗಿ ಮುಂತಾದವರನ್ನು ಹತ್ಯೆಗೈದಿದ್ದಾರೆ ಎಂದು ಚಿದಂಬರಂ ಸಂಸದ ತೋಲ್‌ ತಿರುಮಾವಲನ್‌ ಆರೋಪಿಸಿದ್ದಾರೆ.

Advertisement

ಚೆನ್ನೈಯಲ್ಲಿ ಮಾತನಾಡಿದ ಅವರು, ಹಿಂದುತ್ವ ಸಿದ್ಧಾಂತ ಒಪ್ಪಿಕೊಂಡವರು ಸನಾತನ ಭಯೋ ತ್ಪಾದಕರು. ಅವರು ಶಸ್ತ್ರಾಸ್ತ್ರ ಗಳೊಂದಿಗೆ ಓಡಾಡುತ್ತಿದ್ದಾರೆ. ಯಾರ ಮನೆಗೆ ಬೇಕಾದರೂ ಬಂದು ಗುಂಡು ಹಾರಿಸಬಲ್ಲರು ಎಂದು ಹೇಳಿದ್ದಾರೆ. ಬಿಜೆಪಿ ಸೇರಿದಂತೆ ಬಲಪಂಥೀಯ ಪಕ್ಷಗಳು ತಿರೂಮಾವಲನ್‌ ಅವರ ಹೇಳಿಕೆಯನ್ನು ಖಂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next