Advertisement

ಕದ್ದು ಮುಚ್ಚಿ ಬಂದ ಮಹಾ ಸಚಿವನಿಗೆ ಗೇಟ್‌ಪಾಸ್‌!

11:22 PM Jan 17, 2020 | Lakshmi GovindaRaj |

ಬೆಳಗಾವಿ: ಕಳ್ಳ ದಾರಿ ಹಿಡಿದು ಮಾರುವೇಷದಲ್ಲಿ ಮಹಾರಾಷ್ಟ್ರದಿಂದ ಸರ್ಕಾರಿ ಬಸ್‌ನಲ್ಲಿ ಬೆಳಗಾವಿ ನಗರದ ಎಂಇಎಸ್‌ ಹುತಾತ್ಮ ದಿನಾಚರಣೆಗೆ ಶುಕ್ರವಾರ ಬಂದಿದ್ದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ಯಡ್ರಾವಕರ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಮಹಾರಾಷ್ಟ್ರಕ್ಕೆ ಕಳುಹಿಸಿ ಬಂದಿದ್ದಾರೆ.

Advertisement

ಮಹಾರಾಷ್ಟ್ರ ಏಕೀಕರಣ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಬೆಳಗಾವಿಗೆ ಬಸ್‌ ಮೂಲಕ ಸಚಿವ ಯಡ್ರಾವಕರ ಆಗಮಿಸಿದ್ದರು. ಬಸ್‌ ನಿಲ್ದಾಣದಿಂದ ನೇರವಾಗಿ ಆಟೋ ಮೂಲಕ ಕಾವೇರಿ ಕೋಲ್ಡಿಂಕ್ಸ್‌ ಬಳಿಯ ವೃತ್ತದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೂಜೆ ಸಲ್ಲಿಸಿ ಇನ್ನೇನು ಭಾಷಣ ಮಾಡಬೇಕೆನ್ನುವಷ್ಟರಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಸಚಿವರೊಬ್ಬರು ಆಗಮಿಸಬಹುದು ಎನ್ನುವ ಅನು ಮಾನದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಎಸಿಪಿ ನಾರಾಯಣ ಭರಮಣಿ ಹಾಗೂ ಇನ್ಸ್‌ ಪೆಕ್ಟರ್‌ ಬಿ.ಆರ್‌. ಗಡ್ಡೇಕರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸಿದ್ದರು.

ಆದರೆ ಸಚಿವ ಯಡ್ರಾವಕರ ಬಸ್‌ ಮೂಲಕ ಎಲ್ಲರ ಕಣ್ಣು ತಪ್ಪಿಸಿ ಬೆಳಗಾವಿ ಬಂದಿದ್ದರು. ಯಡ್ರಾವಕರ ಅವರನ್ನು ವಶಕ್ಕೆ ಪಡೆದು ಅವರ ಕಾರಿನಲ್ಲಿಯೇ ಕೊಗನೊಳ್ಳಿ ಟೋಲ್‌ನಾಕಾವರೆಗೆ ಬಿಟ್ಟು ಬರಲಾಯಿತು.  ಇದನ್ನು ಖಂಡಿಸಿ ಮಹಾರಾಷ್ಟ್ರದ ಅನೇಕ ಕಡೆ ಯಡ್ರಾವಕರ್‌ ಬೆಂಬಲಿಗರು ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next