Advertisement

ಕಲ್ಚೆರ್ಪೆ : ಪಯಸ್ವಿನಿ ಒಡಲು ಸೇರುತ್ತಿದೆ ತ್ಯಾಜ್ಯ ರಾಶಿ

05:29 PM Jun 15, 2021 | Team Udayavani |

ಅರಂತೋಡು : ಪೆರಾಜೆ ಸಮೀಪದ ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಲ್ಚೆರ್ಪೆ ಎಂಬಲ್ಲಿ ಸುಳ್ಯ ನಗರ ಪಂಚಾಯತ್ ನ ತ್ಯಾಜ್ಯ ಸಂಗ್ರಹ ಸ್ಥಳದಿಂದ ತ್ಯಾಜ್ಯಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ಸುಳ್ಯದ ಜೀವ ನದಿ ಪಯಸ್ವಿನಿಯ ಒಡಲು ಸೇರಿ ನೀರು ಮಲೀನಗೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಘನ ತ್ಯಾಜ್ಯವನ್ನು ಇಲ್ಲಿಗೆ ತಂದು ರಾಶಿ ಹಾಕಲಾಗಿದೆ.ಆದರೆ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡದೆ ಎರಬಿರ್ರಿಯಾಗಿ ಕಸದ ರಾಶಿ ಬಿದ್ದಿದೆ.ಇನ್ನೂ ಕೆಲವೆಡೆ ತ್ಯಾಜ್ಯಗಳ ನಡುವೆ ನೀರು ನಿಂತುಕೊಂಡು ಶೇಖರಣೆಗೊಂಡಿದ್ದು ನಾರುತ್ತಿವೆ.

ಇದರ ಪಕ್ಕವೇ ಪೂಮಲೆ ಗುಡ್ಡೆಯಯಿಂದ ತೋಡೊಂದು ಹರಿದು ಬರುತ್ತಿದ್ದು ಇದರ ಮೂಲಕ ತ್ಯಾಜ್ಯ ಪಯಸ್ವಿನಿ ನದಿ ಸೇರುತ್ತಿದೆ.ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next