Advertisement

Garadi: ದಯಮಾಡಿ ಉರಿಸಬೇಡ ಬಡವನ ಹೃದಯ

05:40 PM Oct 18, 2023 | Team Udayavani |

ಹೊಸ ಹೊಸ ಪದಗಳ ಮೂಲಕ ರೊಮ್ಯಾಂಟಿಕ್‌ ಹಾಡನ್ನು ಕಟ್ಟಿಕೊಡುವಲ್ಲಿ ಭಟ್ಟರು ಎತ್ತಿದ ಕೈ. ಈಗಾಗಲೇ ಅವರ ಪದಪುಂಜಗಳಲ್ಲಿ ಸಾಕಷ್ಟು ಹಿಟ್‌ ಸಾಂಗ್‌ಗಳು ಬಂದಿವೆ. ಈಗ ಮತ್ತೂಂದು ಹಾಡು ಸದ್ದು ಮಾಡುತ್ತಿದೆ.

Advertisement

ಅದು “ಗರಡಿ’ ಸಿನಿಮಾದ್ದು. ಬಿ.ಸಿ.ಪಾಟೀಲ್‌ ನಿರ್ಮಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಗರಡಿ’ ಚಿತ್ರದಿಂದ “ದಯಮಾಡಿ ಉರಿಸಬೇಡ ಬಡವನ ಹೃದಯ…’ ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡಿ ನಲ್ಲಿ ನಾಯಕ ಯಶಸ್‌ ಸೂರ್ಯ ಹಾಗೂ ಸೋನಾಲ್‌ ಮೊಂತೆರೋ ಕಾಣಿಸಿಕೊಂಡಿದ್ದಾರೆ.

ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಹುಟ್ಟಿದ ಬಗ್ಗೆ ಯೋಗರಾಜ್‌ ಭಟ್‌ ವಿವರಿಸಿದರೆ, ಚಿತ್ರೀಕರಣದ ಅನುಭವವನ್ನು ನಾಯಕ ಯಶಸ್‌ ಸೂರ್ಯ ಹಂಚಿಕೊಂಡರು. ನಿರ್ಮಾಪಕ ಬಿ.ಸಿ.ಪಾಟೀಲ್‌ಗೆ ಚಿತ್ರದ ಹಾಡುಗಳು ಹಿಟ್‌ ಆಗುತ್ತಿರುವ ಖುಷಿಯ ಜೊತೆಗೆ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವ ತಯಾರಿ ಬಗ್ಗೆ ಹೇಳಿಕೊಂಡರು.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು “ಗರಡಿ’ ಚಿತ್ರದ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಇಲ್ಲಿ ಅವರು ಗರಡಿ ಮನೆಯ ಕುಸ್ತಿ ಗುರುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದು ನನ್ನ ಪ್ರೊಡಕ್ಷನ್‌ನ 16ನೇ ಸಿನಿಮಾ. ಈ ಕಥೆ ಚೆನ್ನಾಗಿದೆ. ಮುಂದೆಯೂ ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಲಿ ದ್ದೇವೆ’ ಎಂದರು.

ಚಿತ್ರದ ವಿಲನ್‌ ಪಾತ್ರದಲ್ಲಿ ಬಿ.ಸಿ.ಪಾಟೀಲ್‌ ಅಳಿಯ ಸುಜಯ್‌ ಬೇಲೂರು ನಟಿಸಿದ್ದಾರೆ. ದಯಮಾಡಿ ಉರಿಸಬೇಡ ಬಡವನ ಹೃದಯ ಗರಡಿಯಿಂದ ಹಾಡು ಬಂತು “ಗರಡಿ’ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ನಟ ದರ್ಶನ್‌ ಕೂಡಾ ಒಂದು.

Advertisement

ಹೌದು, ನಟ ದರ್ಶನ್‌ “ಗರಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅತಿಥಿ ಪಾತ್ರದಲ್ಲಿ. ಸಿನಿಮಾಕ್ಕೆ ಟ್ವಿಸ್ಟ್‌ ಕೊಡುವ ಪಾತ್ರ ಇದಾಗಿದ್ದು, ದರ್ಶನ್‌ ಅಭಿಮಾನಿಗಳಿಗೆ ಅವರ ಎಂಟ್ರಿ ಖುಷಿಕೊಡಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. ಇನ್ನು, ಚಿತ್ರದ ಟ್ರೇಲರ್‌ ಹಾಗೂ ಪ್ರೀ ರಿಲೀಸ್‌ ಇವೆಂಟ್‌ ಅನ್ನು ನ.1ರಂದು ರಾಣೆಬೆನ್ನೂರಿ ನಲ್ಲಿ ಅದ್ಧೂರಿಯಾಗಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಟ ದರ್ಶನ್‌ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿತ್ರ ನ.10ರಂದು ತೆರೆಕಾಣಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next