Advertisement

ಬಿರಾಯಾನಿ ಪ್ಯಾಕೆಟ್‌ನಲ್ಲಿ ಗಾಂಜಾ: ಇದು ಪರಪ್ಪನ ಅಗ್ರಹಾರದ ಪ್ಲಾನ್‌ !

10:58 AM Jul 12, 2017 | |

ಬೆಂಗಳೂರು : ಭದ್ರತಾ ಸಿಬಂದಿಗಳನ್ನು ಯಾಮಾರಿಸಿ ಕೈದಿಗಳಿಗೆ ಜೈಲಿನಲ್ಲಿ ಗಾಂಜಾ ಪೂರೈಸಲು ಯತ್ನಿಸಿದ ಖತರ್ನಾಕ್‌ಗಳಿಬ್ಬರು ಬಂಧನಕ್ಕೊಳಗಾಗಿದ್ದಾರೆ. 

Advertisement

ಮಂಗಳವಾರ ಸಂಜೆ ಜೈಲಿನಲ್ಲಿ ಕೈದಿಯೊಬ್ಬನ ಭೇಟಿಗೆಂದು ಬಂದಿದ್ದ ಮೂವರು ಬಿರಿಯಾನಿ ಪ್ಯಾಕೆಟ್‌ನ ಅಡಿಯಲ್ಲಿ  ಗಾಂಜಾ ಪ್ಯಾಕೆಟ್‌ ಇಟ್ಟು ಸಾಗಿಸುತ್ತಿದ್ದರು. ಈ ವೇಳೆ ಇಬ್ಬರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಓರ್ವ ಪರಾರಿಯಾಗಿದ್ದಾನೆ. 

ಬಂಧಿತರು ಹೆಸರಘಟ್ಟ  ಕುಂಬಾರ ಹಳ್ಳಿಯ  ಅರುಣ್‌ ಕುಮಾರ್‌(30)., ಪವನ್‌ ಎನ್ನುವವರಾಗಿದ್ದು, ಪರಾರಿಯಾದಾತ ಸಲೀಂ ಎಂದು ತಿಳಿದು ಬದಿದೆ. 

ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲಿಗೆ ಬರುವ ಕೈದಿಗಳ ಸಂಬಂಧಿಗಳನ್ನು ಇದೀಗ ವ್ಯಾಪಕ ತಪಾಸಣೆಗೊಳಪಡಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next