Advertisement

Ganja: ಗಾಂಜಾ ಸಾಗಿಸುತ್ತಿದ್ದಾಗ ಆಂಧ್ರ ಪೊಲೀಸರ ಬಲೆಗೆ ಬಿದ್ದ ಮಾಜಿ ಕಾರ್ಪೊರೇಟರ್‌ ಪುತ್ರ

10:29 AM Feb 03, 2024 | Team Udayavani |

ಬೆಂಗಳೂರು: ಎರಡು ಕಾರುಗಳಲ್ಲಿ ಒಡಿಶಾದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ವೊಬ್ಬರ ಪುತ್ರ ಸೇರಿ ಮೂವರು ಆಂಧ್ರಪ್ರದೇಶದ ಗುಂಟೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

Advertisement

ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ವೊಬ್ಬರ ಪುತ್ರ ಅಭಿನವ್‌ (30), ಎಚ್‌ಎಸ್‌ ಆರ್‌ ಬಡಾವಣೆಯ ನಿವಾಸಿ ಕಿಶೋರ್‌ ಪ್ರಕಾಶ್‌ರೆಡ್ಡಿ (34), ಸುಮಂತ್‌ ಕುಮಾರ್‌ (24) ಬಂಧಿತರು. 60 ಕೆ.ಜಿ. ಗಾಂಜಾ, 7 ಮೊಬೈಲ್, 2 ಕಾರು, 2.28 ಲಕ್ಷ ರೂ. ಸೇರಿದಂತೆ 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಒಡಿಶಾದ ಕೋರಾಪುಟ್‌ ಜಿಲ್ಲೆಯ ಅರಗೊಂಡ ಗ್ರಾಮದಿಂದ ಗಾಂಜಾ ಖರೀದಿಸಿದ್ದರು. ಎರಡು ಕಾರುಗಳಲ್ಲಿ ಒಡಿಶಾದಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದರು. ಇತ್ತ ಚುನಾವಣೆ ಹಿನ್ನೆಲೆ ಯಲ್ಲಿ ಆಂಧ್ರದ ಪೊತ್ತೂ ರಿನ ಚೆಕ್‌ ಪೊಸ್ಟ್‌ನಲ್ಲಿ ಪೊಲೀಸರು ವಾಹನ ಗಳ ತಪಾ ಸಣೆ ನಡೆಸುತ್ತಿದ್ದರು. ತಪಾಸಣೆ ವೇಳೆ ಆರೋಪಿಗಳು ಇದೇ ಮಾರ್ಗವಾಗಿ ಬೆಂಗಳೂರಿ ನತ್ತ ಬರುತ್ತಿದ್ದರು. ಇವರ ಕಾರನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆ ಆಗಿತ್ತು. ಗುಂಟೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next