Advertisement

ಡ್ರಾವಿಡ್‌, ಗಂಗೂಲಿ ವಿರುದ್ಧ ವೃದ್ಧಿಮಾನ್‌ ಅಸಮಾಧಾನ

11:40 PM Feb 20, 2022 | Team Udayavani |

ಕೋಲ್ಕತಾ: ಶ್ರೀಲಂಕಾ ಸರಣಿಯ ಟೆಸ್ಟ್‌ ತಂಡದಿಂದ ಹೊರ ಬಿದ್ದಿರುವ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ನಿವೃತ್ತಿ ತೆಗೆದುಕೊಳ್ಳುವಂತೆ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದ್ದನ್ನು ಬಹಿರಂಗಪಡಿಸಿದ್ದಾರೆ.

Advertisement

ಮುಂದಿನ ಸರಣಿಗೆ ನನ್ನನ್ನು ಆಯ್ಕೆ ಮಾಡುತ್ತಿಲ್ಲ ಎಂದು ಟೀಮ್‌ ಮ್ಯಾನೇಜ್‌ ಮೆಂಟ್‌ ಮೊದಲೇ ಹೇಳಿತ್ತು. ಹೀಗಾಗಿ ತಂಡ ಪ್ರಕಟವಾಗುವ ಮುನ್ನ ಈ ಬಗ್ಗೆ ನಾನು ಎಲ್ಲಿಯೂ ಮಾತನಾಡುವಂತಿರಲಿಲ್ಲ. ನನಗೆ ನಿವೃತ್ತಿ ತೆಗೆದುಕೊಳ್ಳುವಂತೆ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದ್ದರು ಎಂದು ವೃದ್ಧಿಮಾನ್‌ ಸಾಹಾ ಹೇಳಿದ್ದಾರೆ.

ಭರವಸೆ ನೀಡಿದ್ದ ಗಂಗೂಲಿ
ಟೀಮ್‌ ಇಂಡಿಯಾದಲ್ಲಿ ಸ್ಥಾನದ ಬಗ್ಗೆ ಚಿಂತಿಸಬೇಡ ಎಂದಿದ್ದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ವಿರುದ್ಧವೂ ಸಾಹಾ ವಾಗ್ಧಾಳಿ ನಡೆಸಿದ್ದಾರೆ. ಕಿವೀಸ್‌ ವಿರುದ್ಧ ನಡೆದ ಕಾನು#ರ ಟೆಸ್ಟ್‌ ಪಂದ್ಯದಲ್ಲಿ ನೋವಿನ ನಡುವೆಯೂ ಬ್ಯಾಟ್‌ ಮಾಡಿ ಅಜೇಯ 61 ರನ್‌ ಗಳಿಸಿದ ಸಂದರ್ಭದಲ್ಲಿ ಗಂಗೂಲಿ ನನಗೆ ವಾಟ್ಸಾಪ್‌ ಮೂಲಕ ಶುಭ ಕೋರಿದ್ದರು; ತಾನು ಬಿಸಿಸಿಐ ಪ್ರಧಾನ ಹುದ್ದೆಯಲ್ಲಿ ಇರುವ ವರೆಗೂ ಭಾರತ ತಂಡದಲ್ಲಿ ಸ್ಥಾನದ ಬಗ್ಗೆ ಚಿಂತಿಸಬೇಡ ಎಂದು ಭರವಸೆ ನೀಡಿದ್ದರು. ಅವರ ಈ ಮಾತುಗಳನ್ನು ಕೇಳಿ ನನ್ನ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದರೆ ಇವೆಲ್ಲವೂ ಶೀಘ್ರವೇ ಬದಲಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಫ‌ಲನಾದೆ ಎಂದು ಸಾಹಾ ಅಸಮಾಧಾನ ಹೊರಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next