Advertisement

ತನ್ನದೇ ಕಂಚಿನ ಪ್ರತಿಮೆ ಉದ್ಘಾಟಿಸಿದ ಗಂಗೂಲಿ

03:50 AM Jul 16, 2017 | Harsha Rao |

ಕೋಲ್ಕತಾ: ತನ್ನದೇ ಕಂಚಿನ ಪ್ರತಿಮೆಯೊಂದನ್ನು ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಶನಿವಾರ ಅನಾವರಣಗೊಳಿಸಿದರು. ಪಶ್ಚಿಮ ಬಂಗಾಲದ ಬಾಲೂರ್ಘಾಟ್‌ನ “ಬಿಕಾಸ್‌ ಮೈದಾನ್‌’ದಲ್ಲಿ ಈ ಸಮಾ ರಂಭ ನೆರವೇರಿತು.

Advertisement

ಇದು 8 ಅಡಿಯ ಕಂಚಿನ ಪ್ರತಿಮೆಯಾಗಿದ್ದು, ಗಂಗೂಲಿ ಶತಕ ಬಾರಿ ಸಿದ ಬಳಿಕ ಬ್ಯಾಟ್‌ ಮೇಲೆ ಎತ್ತಿ ಸಂಭ್ರಮಿಸಿದ ಮಾದರಿಯಲ್ಲಿದೆ. 7 ಲಕ್ಷ ರೂ. ಮೌಲ್ಯದ ಈ ಪ್ರತಿಮೆಯನ್ನು ನಿರ್ಮಿಸಿದವರು ಸಿಲಿ ಗುರಿಯ ಶಿಲ್ಪಿ ಸುಸಾಂತ್‌ ಪಾಲ್‌. 
ಈ ಸಮಾರಂಭಕ್ಕಾಗಿ ಗಂಗೂಲಿ ರೈಲಿನಲ್ಲಿ ಆಗಮಿಸಿದ್ದರು. ಸ್ವಲ್ಪ ಹೊತ್ತು ಗೆಸ್ಟ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ನೇರವಾಗಿ ಸಮಾರಂಭ ಸ್ಥಳಕ್ಕೆ ಬಂದರು. 

ಇದು ಪಶ್ಚಿಮ ಬಂಗಾಲದಲ್ಲಿ ನಿರ್ಮಾಣಗೊಂಡ ಗಂಗೂಲಿ ಅವರ 2ನೇ ಪ್ರತಿಮೆ. ಮೊದಲನೆಯದು ಕೋಲ್ಕತಾದಲ್ಲಿದೆ.

ಗಂಗೂಲಿ ಸೀಟಿಗೆ ಲಗ್ಗೆ !
ಈ ಸಮಾರಂಭಕ್ಕೆ ಆಗಮಿಸಲು ಗಂಗೂಲಿ ಸೀಲ್ದಾಹ್‌ ನಿಲ್ದಾಣದಿಂದ “ಪದಾತಿಕ್‌ ಎಕ್ಸ್‌ಪ್ರೆಸ್‌’ ರೈಲನ್ನೇರಿ ದ್ದರು. 15 ವರ್ಷಗಳ ಬಳಿಕ ರೈಲು ಪ್ರಯಾಣದ ಸಂಭ್ರಮದಲ್ಲಿದ್ದರು ದಾದಾ. ತಮಗಾಗಿ ಕಾದಿರಿಸಲಾಗಿದ್ದ ಎಸಿ ಫ‌ಸ್ಟ್‌ಕ್ಲಾಸ್‌ ಕಂಪಾರ್ಟ್‌ ಮೆಂಟ್‌ಗೆ ಆಗಮಿಸಿದಾಗ ಅಚ್ಚರಿ ಯೊಂದು ಕಾದಿತ್ತು. ಅವರ ಜಾಗ ವನ್ನು ಮತ್ತೂಬ್ಬ ಪ್ರಯಾಣಿಕ ಆಕ್ರ ಮಿಸಿಕೊಂಡಿದ್ದ. ಜಾಗ ಬಿಡುವಂತೆ ವಿನಂತಿಸಿಕೊಂಡರೂ ಆತ ಕೇಳಲಿಲ್ಲ. ಗಂಗೂಲಿ ಜತೆ ಜಗಳಕ್ಕೇ ಇಳಿದ. ಅನ್ಯ ಮಾರ್ಗವಿಲ್ಲದೆ ಗಂಗೂಲಿ ರೈಲಿನಿಂದ ಕೆಳಗಿಳಿದರು.

ಗಂಗೂಲಿಯನ್ನು ಕಂಡೊಡನೆ ಪ್ರಯಾಣಿಕರೆಲ್ಲ ಮುತ್ತಿಕೊಂಡರು. ಇವರಿಂದ ಗಂಗೂಲಿಯನ್ನು ಪಾರು ಮಾಡಲು ಆರ್‌ಪಿಎಫ್ನವ ರೇನೋ ಯಶಸ್ವಿಯಾದರು, ಆದರೆ ಗಂಗೂಲಿ ಸೀಟಿನ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಕೊನೆಗೆ ಎಸಿ 2-ಟೈರ್‌ನಲ್ಲಿ ದಾದಾಗೆ ಸೀಟೊಂ ದನ್ನು ವ್ಯವಸ್ಥೆಗೊಳಿಸಲಾಯಿತು. ಹೀಗೆ ಸಾಗಿತ್ತು ಸೌರವ್‌ ಗಂಗೂಲಿ ರೈಲು ಪ್ರಯಾಣ!

Advertisement
Advertisement

Udayavani is now on Telegram. Click here to join our channel and stay updated with the latest news.

Next