Advertisement

ವೆಂಕಟೇಶಕುಮಾರಗೆ ಗಂಗೂಬಾಯಿ ಹಾನಗಲ್ಲ ರಾಷ್ಟ್ರೀಯ ಪುರಸ್ಕಾರ

08:24 AM Oct 26, 2017 | Team Udayavani |

ಹುಬ್ಬಳ್ಳಿ: ಕಲಾ ದರೋಹರ ಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮಹೋತ್ಸವ ವತಿಯಿಂದ ಅ.28 ಹಾಗೂ 29ರಂದು
ಇಲ್ಲಿನ ಕಾಟನ್‌ ಮಾರ್ಕೆಟ್‌ನ ಸಾಂಸ್ಕೃತಿಕ ಭವನದಲ್ಲಿ ರಾಷ್ಟ್ರ ಮಟ್ಟದ ಸಂಗೀತೋತ್ಸವ ಆಯೋಜಿಸಲಾಗಿದ್ದು, ಪದ್ಮಶ್ರೀ ಡಾ. ಎಂ. ವೆಂಕಟೇಶ ಕುಮಾರ ಅವರಿಗೆ ಗಂಗೂಬಾಯಿ ಹಾನಗಲ್ಲ ರಾಷ್ಟ್ರೀಯ ಪುರಸ್ಕಾರ ನೀಡಲಾಗುವುದೆಂದು ಮಹೋತ್ಸವದ ಕಾರ್ಯ ದರ್ಶಿವಿನಯ ನಾಯಕ ತಿಳಿಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.28 ರಂದು ಸಂಜೆ ಗಾಯಕಿ ಗೌರಿ ಪಠಾರೆ ಅವರ ಶಾಸ್ತ್ರೀಯ ಸಂಗೀತ, ಖ್ಯಾತ ಕೊಳಲು ವಾದಕ ಪಂ| ರೋಣು ಮುಜುಮದಾರ ಅವರಿಂದ ಕೊಳಲು ವಾದನ ನಡೆಯಲಿದೆ. 

Advertisement

ಅ.29 ರಂದು ಬೆಳಗ್ಗೆ 9:00 ಗಂಟೆಗೆ ಗಾಯಕಿ ಸಾವನಿ ಶೇಂಡೆ ಇವರಿಂದ ಶಾಸ್ತ್ರೀಯ ಸಂಗೀತ, ಸಂಜೆ ಪಂ. ಪುರಬಾಯನ ಚಟರ್ಜಿ ಇವರ ಸಿತಾರ ವಾದನ ನಂತರ ಪದ್ಮಶ್ರೀ ಪುರಸ್ಕೃತ ಡಾ|ಎಂ.ವೆಂಕಟೇಶ ಕುಮಾರ ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗುವುದು. ಬಳಿಕ  ಡಾ.ವೆಂಕಟೇಶಕುಮಾರ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next