Advertisement

Gangolli ಅಕ್ರಮ ಸಾಗಾಟ; ಅನ್ನಭಾಗ್ಯದ 1, 390 ಕಿಲೋ ಅಕ್ಕಿ ಪೊಲೀಸ್‌ ವಶ

12:55 AM Aug 02, 2024 | Team Udayavani |

ಗಂಗೊಳ್ಳಿ: ನಾಯಕವಾಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಗಂಗೊಳ್ಳಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ಗೂಡ್ಸ್‌ ವಾಹನದಲ್ಲಿ ಕಾನೂನು ಬಾಹಿರವಾಗಿ ಅಕ್ಕಿ ಸಾಗಿಸುತ್ತಿದ್ದುದನ್ನು ಆಹಾರ ನಿರೀಕ್ಷಕ ಸುರೇಶ ಎಚ್‌.ಎಸ್‌. ಹಾಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisement

ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್‌ ಬಳಿ ವಾಹನ ನಿಲ್ಲಿಸಿದಾಗ 24 ಪಾಲಿಥಿನ್‌ ಚೀಲಗಳಲ್ಲಿ ಕುಚ್ಚಲಕ್ಕಿ ಹಾಗೂ 4 ಪಾಲಿಥಿನ್‌ ಚೀಲಗಳಲ್ಲಿ ಬೆಳ್ತಿಗೆ ಅಕ್ಕಿ ಕಂಡುಬಂತು. ಒಟ್ಟು 1,390 ಕೆ.ಜಿ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡಲು ತರಲಾಗುತ್ತಿತ್ತು. ಅಕ್ಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರು ಢಿಕ್ಕಿ; ಸವಾರನಿಗೆ ಗಾಯ
ಗಂಗೊಳ್ಳಿ: ರಾಷ್ಟ್ರೀಯ ಹೆದ್ದಾರಿ 66ರ ಮರವಂತೆಯಲ್ಲಿ ಸ್ಕೂಟರ್‌ಗೆ ಸುಬ್ರಹ್ಮಣ್ಯ ಅವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಢಿಕ್ಕಿಯಾಗಿ ಸ್ಕೂಟರ್‌ ಸವಾರ ನಾಗರಾಜ ಅವರು ಗಾಯಗೊಂಡ ಘಟನೆ ಜು. 31ರ ಸಂಜೆ 6.55ರ ಸುಮಾರಿಗೆ ಸಂಭವಿಸಿದೆ.

ಗಾಯಗೊಂಡ ನಾಗರಾಜ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next