Advertisement

ಗಂಗಾವತಿ: ಸರಕಾರಿ ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳ ವಿರುದ್ಧದ ದೂರು ಕೈ ಬಿಡಲು ಆಗ್ರಹ

10:12 PM Dec 19, 2022 | Team Udayavani |

ಗಂಗಾವತಿ: ಇಡೀ ರಾಜ್ಯದಲ್ಲೇ ಅತ್ಯುತ್ತಮ ಸೇವೆ ಮತ್ತು ಆಡಳಿತಕ್ಕೆ ಹೆಸರಾಗಿರುವ ಗಂಗಾವತಿ ಸರಕಾರಿ ಆಸ್ಪತ್ರೆ ಮತ್ತು ಇಲ್ಲಿಯ ವೈದ್ಯಾಧಿಕಾರಿಗಳು, ವೈದ್ಯರು ಸಿಬಂದಿ ವರ್ಗದ ವಿರುದ್ಧ ಕೆಲ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಸಲ್ಲಿಸಿರುವ ದೂರನ್ನು ಕೂಡಲೇ ಕೈ ಬಿಡುವಂತೆ ಬಿಎಸ್ ಪಿ ಮುಖಂಡರು ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಇಲ್ಲಿ ಸರಕಾರ ಆಸ್ಪತ್ರೆಯಲ್ಲಿ ಪ್ರತಿಯೊಂದಕ್ಕೂ ಹಣ ಪಡೆಯಲಾಗುತ್ತಿದೆ ಎಂದು ಷಡ್ಯಂತ್ರ ರೂಪಿಸಿ ಕೆಲ ಖಾಸಗಿ ಆಸ್ಪತ್ರೆಗಳ ಕುಮ್ಮಕ್ಕಿನಿಂದ ದೂರು ಸಲ್ಲಿಸಲಾಗಿದ್ದು ಇದರಿಂದ ವೈದ್ಯಾಧಿಕಾರಿ ಮತ್ತು ವೈದ್ಯರು ಸಿಬಂದಿಗಳ ನೈತಿಕತೆ ಕುಸಿಯುವಂತೆ ಮಾಡುವ ಕುತಂತ್ರ ಅಡಗಿದೆ. ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಸೇವೆ ಹಾಗೂ ಹೆರಿಗೆ ಮಾಡಿಸಿಕೊಳ್ಳುವ ಆಸ್ಪತ್ರೆ ಇದಾಗಿದೆ. ಬಡವರು ದಲಿತ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿಯ ಆಸ್ಪತ್ರೆ ಆರೋಗ್ಯ ಸೇವೆ ಅಮೂಲ್ಯವಾಗಿದ್ದು ಇದರ ವಿರುದ್ಧ ಷಡ್ಯಂತ್ರ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ಮುಖಂಡರಾದ ಶಂಕರ ಸಿದ್ದಾಪೂರ, ಬಿ.ಲಕ್ಷ್ಮಿಪತಿ ಹಾಗೂ ಗಂಗಣ್ಣ ಸಿದ್ದಾಪೂರ, ಆದೆಪ್ಪ ಸಿಂಗನಾಳ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next