Advertisement

ಗಂಗಾವತಿ: ರೈಲು ಡಿಕ್ಕಿಯಾಗಿ ಯುವಕ ಸಾವು

09:53 AM Nov 28, 2019 | sudhir |

ಗಂಗಾವತಿ: ರೈಲು ಡಿಕ್ಕಿ ಹೊಡೆದು ಗುಜರಾತ್ ಮೂಲದ ಯುವಕನೊರ್ವ ಮೃತಪಟ್ಟ ಘಟನೆ ಗಂಗಾವತಿ ಕೊಪ್ಪಳ ರಸ್ತೆಯ ರೈಲ್ವೇ ಮೇಲ್ಸೇತುವೆ ಬಳಿ ನಡೆದಿದೆ.

Advertisement

ಮೃತ ಯುವಕನನ್ನು ವಿಪುಲ ಕುಮಾರ ಭರತ್(18) ಎಂದು ಗುರುತಿಸಲಾಗಿದ್ದು, ಈತನು ಗುಜರಾತ್ ಪಟ್ನಾದ ನಿವಾಸಿ. ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಕೆಲಸ ಮಾಡಲು ಆಗಮಿಸಿದ್ದು. ಬುಧವಾರ ಕಿವಿಯಲ್ಲಿ ಮೊಬೈಲ್ ಸ್ಪೀಕರ್ ಇಟ್ಟುಕೊಂಡು ಪದ್ಯ ಕೇಳುತ್ತಾ ಹೋಗುವ ಸಂದರ್ಭದಲ್ಲಿ ಹಿಂದಿನ ಆಗಮಿಸಿದ ರೈಲು ಡಿಕ್ಕಿ ಹೊಡೆದಿದೆ.  ಪರಿಣಾಮವಾಗಿ ವಿಪುಲಕುಮಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next