Advertisement

ಕೋವಿಡ್-19 ಕರ್ತವ್ಯದ ನಡುವೆ ಪೊಲೀಸರಿಂದ ಭರ್ಜರಿ ಬೇಟೆ: ಮೂವರು ಅಂತರಾಜ್ಯ ಕಳ್ಳರ ಬಂಧನ

05:57 PM Mar 31, 2020 | Team Udayavani |

ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ಜನರನ್ನು ಮನೆಯಿಂದ ಹೊರಗೆ ಬಿಡದೇ ಕರ್ತವ್ಯ ನಿಭಾಯಿಸುತ್ತಿರುವ ಪೊಲೀಸರು ನಗರದಲ್ಲಿ ನಡೆಯುತ್ತಿರುವ ಮನೆಗಳ್ಳತನ ಮಾಡಿ ಜನರಿಗೆ ಭೀತಿಮೂಡಿಸಿದ್ದ ಮೂರು ಜನ ಅಂತಾತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

Advertisement

ಈ ಮೂವರು ಚೋರರಿಂದ ಪೊಲೀಸರು 12 ಲಕ್ಷ ರೂ.ಮೌಲ್ಯದ ಬೆಳ್ಳಿ ಬಂಗಾರ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಅಭಿಜಿತ್ ಜಾಧವ್, ಸಚಿನ್ ಗಾಯಕವಾಡ, ಹುಸೇನ್ ಗಾಯಕವಾಡ ಬಂಧಿತ ಆರೋಪಿಗಳು.

ಈ ಆರೋಪಿಗಳು ನಗರ ಹಾಗು ಗ್ರಾಮೀಣ ಭಾಗದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಬಾಗಿಲು ಮುರಿದು ಕಳ್ಳತನ ಮಾಡಿದ್ದರು.

ಈ ಕಳ್ಳರಿಂದ 225 ಗ್ರಾಂ ಚಿನ್ಬಾಭರಣ, 2670 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆದಿದ್ದಾರೆ. ಲಾಕ್ ಡೌನ್ ಕೆಲಸದ ಒತ್ತಡದ ನಡುವೆಯೂ ಗಂಗಾವತಿ ನಗರ ಪೊಲೀಸರ ಕಾರ್ಯಕ್ಷಮತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next