Advertisement

ಭತ್ತದ ಬೆಳೆ ನಷ್ಟ: ಗದ್ದೆಗಿಳಿದು ಪರಿಶೀಲಿಸುವಂತೆ ಜನ ಪ್ರತಿನಿಧಿಗಳ ಕಾರುಗಳಿಗೆ ರೈತರ ಘೇರಾವ್

07:05 PM Apr 09, 2020 | keerthan |

ಗಂಗಾವತಿ: ಅಕಾಲಿಕ ಮಳೆಯ ಕಾರಣ ನೆಲಕ್ಕುರುಳಿದ ಭತ್ತದ ಬೆಳೆ ವೀಕ್ಷಣೆಗೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗು ಶಾಸಕ ಸಂಸದರು ಮತ್ತು  ಅಧಿಕಾರಿಗಳ ಕಾರುಗಳಿಗೆ ಮರಕುಂಬಿ ಗ್ರಾಮಸ್ಥರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಗುರುವಾರ ಜರುಗಿದೆ.

Advertisement

ಈ ಸಂದರ್ಭದಲ್ಲಿ ಸಚಿವ ಬಿ.ಸಿ ಪಾಟೀಲ್ ಹಾಗು ಶಾಸಕ‌, ಸಂಸದರು ಅನ್ಯ ಕಾರಿನಲ್ಲಿ ಮುಂದೆ ಹೋಗಿದ್ದರು.ಇದು ರೈತರಿಗೆ ತಿಳಿಯದೆ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ಮತ್ತು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಜನಪ್ರತಿನಿಧಿಗಳ ಕಾರುಗಳನ್ನು ಅರ್ಧ ಗಂಟೆಗೂ ಹೆಚ್ಚು ನಿಲ್ಲಿಸಿ ಗದ್ದೆಗೆ ಇಳಿದು ನೆಲಕ್ಕೆ ಬಿದ್ದಿರುವ ನೆಲ್ಲು ವೀಕ್ಷಿಸುವಂತೆ ಒತ್ತಾಯಿಸಿದರು. ಈ ಮಧ್ಯೆ ಪೊಲೀಸರು ಪ್ರವೇಶ ಮಾಡಿ ಘೇರಾವ್ ಹಾಕಿದವರನ್ನು ಸಮಾಧಾನಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next