Advertisement

ಗಂಗಾವತಿ : ಮಾಜಿ ಸಚಿವ ಸಿ.ಯಾದವ್ ರಾವ್ ನಿಧನ 

08:06 PM Apr 06, 2022 | Team Udayavani |

ಗಂಗಾವತಿ :ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ಸಿ. ಯಾದವ್ ರಾವ್ (86) ಬುಧವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ .

Advertisement

ಯಾದವರಾವ್ 1978 ರಲ್ಲಿ ದೇವರಾಜ ಅರಸು ಸಚಿವ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು .ಮಾಜಿ ಸಂಸದ ಎಚ್. ಜಿ. ರಾಮುಲು ಅವರ ನಿಕಟವರ್ತಿಯಾಗಿದ್ದ ಸಿ. ಯಾದವ್ ಅವರು ಮೀನುಗಾರಿಕೆ ಸಚಿವರಾಗಿ ಪ್ರಮುಖ ಕಾರ್ಯ ಯೋಜನೆಯನ್ನು ಅನುಷ್ಠಾನ ಮಾಡಿದ್ದರು .ಪತ್ನಿ ಇಬ್ಬರು ಪುತ್ರಿಯರು ನಾಲ್ವರು ಪುತ್ರರನ್ನು ಅಗಲಿದ್ದಾರೆ .

ಯಾದವ್ ರಾವ್ ನಿಧನಕ್ಕೆ ಮಾಜಿ ಸಂಸದ ಎಚ್ ಜಿ ರಾಮುಲು, ಶಿವರಾಮಗೌಡ ,ಕೆ ವಿರೂಪಾಕ್ಷಪ್ಪ ,ಶಾಸಕ ಪರಣ್ಣ ಮುನವಳ್ಳಿ ,ದಡೇಸುಗೂರು ಬಸವರಾಜ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಶಿವರಾಜ್ ತಂಗಡಗಿ ಮಲ್ಲಿಕಾರ್ಜುನಾಗಪ್ಪ ಶ್ರೀರಂಗದೇವರಾಯಲು ಲಲಿತಾರಾಣಿ,ಎಚ್ ಆರ್ ಶ್ರೀನಾಥ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next