Advertisement

ಹಳೆದ್ವೇಷ, ಲವ್ ಕೇಸ್ ಹಿನ್ನೆಲೆ; ಮನೆಯಿಂದ ಹೊರಗೆಳೆದು ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಕೊಲೆ

09:33 AM May 02, 2022 | Team Udayavani |

ಬಳ್ಳಾರಿ: ನಗರದ ಹವಂಬಾವಿಯಲ್ಲಿ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

Advertisement

ಸ್ಥಳೀಯ ನಿವಾಸಿ ಮಹೇಂದ್ರ (37 ವ) ಕೊಲೆಯಾದ ರೌಡಿಶೀಟರ್. ಬೆಳಗಲ್ ತಾಂಡಾದ ರಮೇಶ್ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಮಹೇಂದ್ರ, ಜೈಲಿನಲ್ಲಿದ್ದು ಕಳೆದ ಆರು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಬಂದಿದ್ದನು.

ಹಳೇ ದ್ವೇಷ ಹಾಗೂ ವರ್ಷದ ಹಿಂದೆ ಬಾವ ಮೈದನು ಹುಡುಗಿಯೊಬ್ಬಳನ್ನು ಪ್ರೀತಿಸಿದ ವಿಚಾರವಾಗಿ ಭಾನುವಾರ 30ಕ್ಕೂ ಹೆಚ್ಚು ಜನರು ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಹೇಂದ್ರನನ್ನು ಮನೆಯಿಂದ ಹೊರಗೆಳೆದು ತಂದು ಮಚ್ಚು ಲಾಂಗುಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ:ಬಿಸಿಲಿನ ರುದ್ರನರ್ತನ ; ಉತ್ತರ,ವಾಯವ್ಯದಲ್ಲಿ ಉಷ್ಣ ಹವೆ ಮುಂದುವರಿಕೆ

ನವೀನ್, ಕೇಶವ್, ಶಂಕರ್, ನಾರಾಯಣಿ, ವಂಶಿ, ಧನಂಜಯ ಎನ್ನುವವರು ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ಮಾಡಿದ ಆರೋಪಿಗೆ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಬೆಂಬಲವಿದೆ ಎಂದೂ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ನಿರಂಜನ್, ಎಸ್ ಪಿ ಸೈದುಲು ಅಡಾವತ್ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಿಗೆ ತೀವ್ರ ಶೋಧ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next